Advertisement

ಕಿತ್ತೂರು ಚನ್ನಮ್ಮ ಶಾಲೆಯಲ್ಲಿ ಕ್ವಾರಂಟೈನ್‌ ಬೇಡ

11:54 AM May 06, 2020 | mahesh |

ನಾಗಮಂಗಲ: ಹೊರ ರಾಜ್ಯಗಳಿಂದ ಬರುವ ಕಾರ್ಮಿಕರನ್ನು ತಾಲೂಕಿನ ಕದಬಹಳ್ಳಿ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಕ್ವಾರಂಟೈನ್‌ ಮಾಡಲು ಸ್ಥಳ ಪರಿಶೀಲನೆಗೆ ಬಂದಿದ್ದ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡರ ವಿರುದ್ಧ ಶಾಸಕ ಸುರೇಶ್‌ಗೌಡ ಮತ್ತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

Advertisement

ಸಚಿವ ನಾರಾಯಣಗೌಡರು ಸ್ಥಳಕ್ಕಾಗಮಿಸುವುದನ್ನೇ ಕಾಯುತ್ತಿದ್ದ ಶಾಸಕರು ಮತ್ತು ಸ್ಥಳೀಯರು, ಸಚಿವರು ಬಂದು ವಿಷಯ ಪ್ರಸ್ತಾಪಿಸಿದ ಕೂಡಲೇ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಜನವಸತಿ ಪ್ರದೇಶವಾಗಿದೆ. ಇಲ್ಲಿ ಕ್ವಾರಂಟೈನ್‌ ಮಾಡುವುದಕ್ಕೆ ಬಿಡುವುದಿಲ್ಲವೆಂದು ವಿರೋಧ ವ್ಯಕ್ತಪಡಿಸಿದರು. ತಾಳ್ಮೆ ಕಳೆದುಕೊಂಡ ಸಚಿವ ನಾರಾಯಣಗೌಡ, ನಾನಿಲ್ಲಿಗೆ ಸ್ಥಳ ಪರಿಶೀಲನೆಗೆ ಆಗಮಿಸಿದ್ದೇನೆ. ನನ್ನ ನಿರ್ಧಾರವನ್ನು ಪ್ರಶ್ನೆ ಮಾಡಲು ನೀವ್ಯಾರು? ಮರ್ಯಾದೆ ಕೊಡುವುದನ್ನು ಕಲಿಯಿರಿ. ಸರ್ಕಾರದ ಕೆಲಸ ಮಾಡಲು ಬಂದಿದ್ದೇನೆ. ನಾನೇನು ಕೊರೊನಾ ಸೋಂಕಿತರನ್ನು ಕರೆತಂದಿಲ್ಲ. ದೊಣ್ಣೆ ಹೊತ್ತು ನಿಂತಿದ್ದೀರಾ? ಯಾವನೇನ್‌ ಮಾಡ್ತಾನೆ ನಾನೂ ನೋಡೇ ಬಿಡ್ತೀನಿ, ತಮಟೆ ಹೊಡೆಸಿ ಜನಸೇರಿಸಿ ಪ್ರತಿಭಟನೆ ಮಾಡುತ್ತಿದ್ದೀರ ಎಂದು ಏರು ಧ್ವನಿಯಲ್ಲಿ ಕೂಗಾಡಿದರು.

ನಮ್ಮ ತಾಲೂಕಿಗೆ ಯಾರನ್ನೂ ಕರೆದುಕೊಂಡು ಬರಬೇಡಿ ಎಂದು ಶಾಸಕ ಸುರೇಶ್‌ಗೌಡ ಸಚಿವರಲ್ಲಿ ಮನವಿ ಮಾಡಿದರು. ಆದರೂ ಸಚಿವರ ವಿರೋಧದ ನಡುವೆಯೂ ಅಧಿಕಾರಿಗಳೊಂದಿಗೆ ವಸತಿ ಶಾಲೆ ಪರಿಶೀಲಿಸಿ, ಕ್ವಾರಂಟೈನ್‌ಗೆ ಸಿದ್ದತೆ ಮಾಡಿಕೊಳ್ಳವಂತೆ ಸೂಚಿಸಿ,ನಾಗಮಂಗಲ ಮಾತ್ರವಲ್ಲ, ಇಡೀ ಜಿಲ್ಲೆಯಲ್ಲೆ ಕೆಲವು ಸ್ಥಳಗಳನ್ನು ಸಿದಟಛಿ‌ªತೆ ಮಾಡಿ ಇಟ್ಟುಕೊಳ್ಳುತ್ತಿದ್ದೇವೆ
ಎಂದು ಹೇಳಿದರು.

ಕ್ವಾರಂಟೈನ್‌ಗೆ ಬಿಡುವುದಿಲ್ಲ: ನಾರಾಯಣಗೌಡರು ಬಾಂಬೆಯಿಂದ 2 ಸಾವಿರ ಜನರನ್ನು ಕರೆತಂದು ಇಲ್ಲಿ ಕ್ವಾರಂಟೈನ್‌ ಮಾಡಲು ಉದ್ದೇಶಿಸಿದ್ದಾರೆ. ಹೊರ ರಾಜ್ಯಗಳಿಂದ ಬರುವವರನ್ನು ನನ್ನ ತಾಲೂಕಿನಲ್ಲಿ ಕ್ವಾರಂಟೈನ್‌ ಮಾಡಲು ಬಿಡುವುದಿಲ್ಲ. ಇಂತಹ ವಿಷಯದಲ್ಲಿ ರಾಜಕೀಯ ಮಾಡಬಾರದು ಎಂದು ಸುಮ್ಮನಿದ್ದೇವೆ. ಆದರೆ ಯಾವ ಕಾರಣಕ್ಕೂ ಇಲ್ಲಿ ಸ್ಥಳಕ್ಕೆ ಅವಕಾಶ ಕೊಡಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next