Advertisement

11ರವರೆಗೆ ಹತ್ತಿ ಖರೀದಿ ಸ್ಥಗಿತ

08:57 AM Jun 09, 2020 | Suhan S |

ಧಾರವಾಡ: ಭಾರತೀಯ ಹತ್ತಿ ನಿಗಮದ ವತಿಯಿಂದ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಆರಂಭಿಸಿದ್ದ ಹತ್ತಿ ಖರೀದಿ ಪ್ರಕ್ರಿಯೆಯನ್ನು ಮತ್ತೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

Advertisement

ಧಾರವಾಡ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವ್ಯಾಪ್ತಿಯಲ್ಲಿ ಬರುವ ಬೇಲೂರಿನ ಕೈಗಾರಿಕಾ ಪ್ರದೇಶದಲ್ಲಿನ ರಾಮದೇವ ಅಗ್ರೋ ಇಂಡಸ್ಟ್ರೀಸ್‌ ಶ್ರೀ ಲಕ್ಷೀ ಕಾಟನ್ಸ್‌ ಫ್ಯಾಕ್ಟರಿಗಳ ಆವರಣದಲ್ಲಿ ಹತ್ತಿ ಖರೀದಿ ಕೇಂದ್ರ (ಪ್ರೂಕ್ಯೂರ್‌ವೆುಂಟ್‌ ಸೆಂಟರ್‌)ಇದೆ. ಈವರೆಗೆ ಹತ್ತಿ ಮಾರಾಟ ಮಾಡಿದ ರೈತರ ಖಾತೆಗೆ ಹಣ ಪಾವತಿಸುವ ಕೆಲಸ, ಖರೀದಿ ಮತ್ತು ಬಿಲ್‌ ಗಳ ಪಾವತಿ ಬಗ್ಗೆ ಕಚೇರಿ ಕೆಲಸಗಳು ಬಾಕಿ ಇರುವುದರಿಂದ ಜೂ.9ರಿಂದ ಜೂ.11ರವರೆಗೆ ಹತ್ತಿ ಖರೀದಿ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ.

ಜೂ.12ರಿಂದ ಮತ್ತೆ ಹತ್ತಿ ಖರೀದಿ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದು ಭಾರತೀಯ ಹತ್ತಿ ನಿಗಮದ ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next