Advertisement

ಲೋಯಾ ಸಾವು: ಸ್ವತಂತ್ರ ತನಿಖೆ ಬೇಕಿಲ್ಲ

09:50 AM Apr 20, 2018 | Karthik A |

ಹೊಸದಿಲ್ಲಿ: ನ್ಯಾಯಾಂಗ ವ್ಯವಸ್ಥೆಯಲ್ಲೇ ಮೊದಲ ಬಾರಿಗೆ ‘ನ್ಯಾಯಮೂರ್ತಿಗಳ ಪತ್ರಿಕಾಗೋಷ್ಠಿ’ಗೆ ಕಾರಣವಾಗಿದ್ದ ಸಿಬಿಐ ಕೋರ್ಟ್‌ನ ನ್ಯಾಯಾಧೀಶ ಲೋಯಾ ಕೇಸಿನ ಸ್ವತಂತ್ರ ತನಿಖೆ ಅಗತ್ಯವಿಲ್ಲ ಎಂದು ಸುಪ್ರೀಂಕೋರ್ಟ್‌ ತೀರ್ಪು ನೀಡಿದೆ. ನ್ಯಾ| ಲೋಯಾ ಸಾವಿನ ಕೇಸಿನ ಬಗ್ಗೆ ತನಿಖೆಗಾಗಿ ಸಲ್ಲಿಸಿದ್ದ ಅರ್ಜಿಗಳು ಇಡೀ ನ್ಯಾಯಾಂಗ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಮತ್ತು ಪುಕಾರು ಹಬ್ಬಿಸುವ ಕೆಲಸ ಎಂದೂ ಮುಖ್ಯ ನ್ಯಾ| ದೀಪಕ್‌ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ಖಡಕ್ಕಾಗಿ ಹೇಳಿದೆ.

Advertisement

ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ, ನ್ಯಾಯ ಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್‌ ಮತ್ತು ಡಿ.ವೈ. ಚಂದ್ರಚೂಡ್‌ ಅವರನ್ನೊಳಗೊಂಡ ಪೀಠ ನ್ಯಾ| ಲೋಯಾ ಸಾವಿನ ಕುರಿತಂತೆ ನಾಲ್ವರು ನ್ಯಾಯಾಧೀಶರು ದಾಖಲಿಸಿರುವ ಹೇಳಿಕೆಗಳ ಬಗ್ಗೆಯೂ ಯಾವುದೇ ಅನುಮಾನಪಡಬಾರದು ಎಂದಿದೆ. ಅಲ್ಲದೆ ಲೋಯಾ ಅವರದು ಸ್ವಾಭಾವಿಕ ಸಾವು ಎಂಬುದನ್ನು ದಾಖಲಾಗಿರುವ ಹೇಳಿಕೆಗಳು ಪುಷ್ಟೀಕರಿಸುತ್ತಿವೆ ಎಂದು ಪ್ರತಿಪಾದಿಸಿದೆ. ಸ್ವತಂತ್ರ ತನಿಖೆಗೆ ಸಲ್ಲಿಸಿದ ಅರ್ಜಿಗಳು ನ್ಯಾಯಾಂಗದ ಸ್ವಾತಂತ್ರ್ಯದ ಮೇಲೆ ದಾಳಿ ನಡೆಸುವಂತಿವೆ. ರಾಜಕೀಯ ವಿರೋಧಿಗಳನ್ನು ಹಣಿಯಲು ಈ ಅರ್ಜಿ ಸಲ್ಲಿಸಲಾಗಿದೆ ಎಂದು ನ್ಯಾಯಪೀಠ ಕಟುವಾಗಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next