Advertisement

ಶವದ ಮೇಲೆ ಯಾರೂ ರಾಜಕಾರಣ ಮಾಡುವುದು ಬೇಡ; ಸಿಎಂ 

11:22 AM Jan 07, 2018 | |

ಮಂಗಳೂರು: ‘ದ್ವೇಷ ರಾಜಕಾರಣ ಇದೆಯಲ್ಲ ಅದಕ್ಕೆ ಕೊನೆಯೇ ಇಲ್ಲ. ಯಾರೂ ಶವದ ಮೇಲೆ ರಾಜಕಾರಣ ಮಾಡಬಾರದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಮನವಿ ಮಾಡಿದ್ದಾರೆ.

Advertisement

 ಮಂಗಳೂರಿನಲ್ಲಿ ದುಷ್ಕರ್ಮಿಗಳಿಂದ ದಾಳಿಗೊಳಗಾಗಿ ಬಶೀರ್‌ ಅವರು ಸಾವನ್ನಪ್ಪಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ’ಧಾರ್ಮಿಕ ಭಾವನೆಗಳನ್ನು ಕೆರಳಿಸುವುದರಿಂದ ಸಮಾಜಕ್ಕೆ ಹಾನಿಯಾಗುತ್ತದೆ, ಅದರಿಂದ ಲಾಭ ಯಾರಿಗೂ ಇಲ್ಲ’ ಎಂದರು. 

‘ಶವದ ಮೇಲೆ ರಾಜಕಾರಣ ಮಾಡಬಾರದು. ಸತ್ತಾಗ ಸಾತ್ವಾನ ಹೇಳಬೇಕು’ ಎಂದರು. 

‘ಬಿಜೆಪಿಯವರು ಒಬ್ಬರು ಸತ್ತ ತಕ್ಷಣ ಪ್ರತಿಭಟನೆ ಮಾಡುತ್ತಾರೆ. ಅವರಿಗೆ ಮನುಷತ್ವ ಇದ್ದರೆ ಈಗಲೂ ಪ್ರತಿಭಟನೆ ಹಮ್ಮಿಕೊಳ್ಳಬೇಕಲ್ಲ, ಮುಸ್ಲಿಂ ಸತ್ತರೆ ಯಾಕೆ ಪ್ರತಿಭಟನೆ ನಡೆಸುವುದಿಲ್ಲ’ ಎಂದು ಕಿಡಿ ಕಾರಿದರು. 

Advertisement

Udayavani is now on Telegram. Click here to join our channel and stay updated with the latest news.

Next