Advertisement

ಯಾವುದೇ ನೋಟಿಸ್‌ ಬಂದಿಲ್ಲ

06:55 AM Jun 22, 2018 | Team Udayavani |

ಬೆಂಗಳೂರು: “ನನಗೆ ಯಾವುದೇ ನೋಟಿಸ್‌ ಬಂದಿಲ್ಲ. ದೆಹಲಿಯ ಆಪ್ತ ಸಹಾಯಕ ಆಂಜನೇಯ ಮನೆಯಲ್ಲಿ ಸಿಕ್ಕ ಹಣಕ್ಕೂ, ನನಗೂ ಯಾವುದೇ ಸಂಬಂಧವಿಲ್ಲ’ ಎಂದು ಸಚಿವ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

Advertisement

ನಗರದಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿ, “ಮಾಧ್ಯಮಗಳೇ ಜನರಿಗೆ ಬೇಕಾದ ಮನರಂಜನೆ ಕೊಡುತ್ತಿವೆ. ಈ ಘಟನೆಯನ್ನೆಲ್ಲಾ ನೋಡಿ ನಿಜಕ್ಕೂ ನನಗೆ ಶಾಕ್‌ ಆಗಿದೆ’ ಎಂದು ಹೇಳಿದರು.

“ನಾನಂತೂ ಯಾರಿಗೂ ಹಣ ಕೊಟ್ಟಿಲ್ಲ, ಹಣ ಪಡೆದಿಲ್ಲ. ಕಾಲವೇ ಎಲ್ಲದಕ್ಕೂ ಉತ್ತರಿಸಲಿದೆ’ ಎಂದರು.ಬಿಜೆಪಿ ನಾಯಕರ ಬಗ್ಗೆ ಮಾತನಾಡಲು ಸಾಕಷ್ಟು ವಿಚಾರ ಇದೆ. ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅವರಿಗೆ ಆಲ್‌ ದಿ ಬೆಸ್ಟ್‌ ಹೇಳುತ್ತೇನೆ. ಬಿಜೆಪಿಯಲ್ಲಿ ಸಾಕಷ್ಟು ಉದ್ಯಮಿಗಳು,ಹೋಟೆಲ್‌ ಮಾಲಿಕರಿದ್ದಾರೆ. ಬೇರೆ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡವರು ಇದ್ದಾರೆ. ಆದರೆ, ಎಲ್ಲದಕ್ಕೂ ಒಳ್ಳೆಯ ಟೈಂ ಬರಬೇಕು ಎಂದರು.

ಕಾಂಗ್ರೆಸ್‌ ಮುಖಂಡರನ್ನು ಗುರಿಯಾಗಿಸಿ ಕೊಂಡು ಐಟಿ ದಾಳಿಗಳು ನಡೆಯುತ್ತಿದ್ದು, ಕೇಂದ್ರ ಸರ್ಕಾರ ಐಟಿ, ಸಿಬಿಐ ಹಾಗೂ ಇಡಿ ಇಲಾಖೆಗಳನ್ನು ರಾಜಕೀಯ ಉದ್ದೇಶಕ್ಕಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ.
– ಡಾ.ಜಿ.ಪರಮೇಶ್ವರ್‌, ಡಿಸಿಎಂ

ಕಾನೂನಿನ ಮೂಲಕವೇ ಶಿವಕುಮಾರ್‌ ಉತ್ತರ ನೀಡಲಿದ್ದಾರೆ. ಅವರಿಗೆ ನಾವೆಲ್ಲ ಬೆಂಬಲವಾಗಿದ್ದೇವೆ.
–  ದಿನೇಶ್‌ ಗುಂಡೂರಾವ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next