Advertisement

Kerala: ಶಾಲೆಗಳಲ್ಲಿ ಇನ್ನು “ನೀರಿನ ಬೆಲ್‌”

09:24 PM Feb 17, 2024 | Team Udayavani |

ತಿರುವನಂತಪುರ: ಶಾಲೆಗಳಲ್ಲಿ ಊಟದ ವಿರಾಮದ ಬಗ್ಗೆ ಕೇಳಿರುತ್ತೀರಿ. ಆದರೆ, ಕೇರಳದ  ಶಾಲೆಗಳಲ್ಲಿ ಇನ್ಮುಂದೆ ನೀರಿನ ವಿರಾಮವೂ ಇರುತ್ತದಂತೆ. ಹೀಗೆಂದು ಕೇರಳ ಸರ್ಕಾರವೇ ಘೋಷಿಸಿದೆ.

Advertisement

ರಾಜ್ಯದಲ್ಲಿ ತಾಪಮಾನ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ, ಮಕ್ಕಳು ಅಗತ್ಯ ಪ್ರಮಾಣದ ನೀರು ಕುಡಿಯುವುದನ್ನು ಪ್ರೇರೇಪಿಸಲು ಶಾಲೆಗಳಲ್ಲಿ ಫೆ.20ರಿಂದ ಬೆಳಿಗ್ಗೆ 10.30ಕ್ಕೆ ಹಾಗೂ ಮಧ್ಯಾಹ್ನ 2.30ಕ್ಕೆ ನೀರಿನ ಬೆಲ್‌ ಹೊಡೆದು, ಐದು ನಿಮಿಷಗಳ ವಿರಾಮ ನೀಡಲಾಗುತ್ತದೆ. ಇದರಿಂದ ಮಕ್ಕಳಲ್ಲಿ ಸಂಭವಿಸಬಹುದಾದ ನಿರ್ಜಲೀಕರಣ ಸಮಸ್ಯೆಯನ್ನು ತಪ್ಪಿಸಬಹುದು ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next