Advertisement

ಎಷ್ಟೇ ಕಷ್ಟವಾದರೂ ಐದು ಯೋಜನೆ ಜಾರಿ ಗ್ಯಾರಂಟಿ: ಸಿದ್ದರಾಮಯ್ಯ ಪುನರುಚ್ಛಾರ

02:17 PM Jun 27, 2023 | Team Udayavani |

ಹಾಸನ: ವಿಪಕ್ಷದವರು ಎಷ್ಟೇ ಆರೋಪ ಮಾಡಲಿ. ಕಾಂಗ್ರೆಸ್ ಚುನಾವಣೆ ಸಂದರ್ಭದಲ್ಲಿ ಘೋಷಣೆ ಮಾಡಿರುವ ಗ್ಯಾರಂಟಿಯ ಶಕ್ತಿ, ಗೃಹಜ್ಯೋತಿ, ಗೃಹಭಾಗ್ಯ, ಅನ್ನಭಾಗ್ಯ, ಯುವನಿಧಿ ಕಾರ್ಯಕ್ರಮಗಳನ್ನು ಎಷ್ಟೇ ಕಷ್ಟವಾದರೂ ಸರಕಾರ ಜಾರಿ ಮಾಡಲಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹೇಳಿದರು.

Advertisement

ಹಾಸನದಲ್ಲಿ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಗ್ಯಾರಂಟಿಗಳ ಜಾರಿಗೆ ವರ್ಷಕ್ಕೆ 59 ಸಾವಿರ ಕೋಟಿ ರೂ. ಅಗತ್ಯ. ಈ ಹೆಚ್ಚುವರಿ ಹೊರೆಯನ್ನು ನಿಭಾಯಿಸಿಕೊಂಡು ಈ ವರ್ಷ ಸರ್ಕಾರ ನಡೆಸಲು ಕಷ್ಟವಾಗಬಹುದು. ಆದರೂ ಗ್ಯಾರಂಟಿಗಳ ಜಾರಿ ಮಾಡುವುದು ಖಚಿತ ಎಂದರು.

ಬಿಜೆಪಿ ಸರ್ಕಾರದಲ್ಲಿ ನಿರ್ಮಾಣ ಮಾಡಿರುವ 4 ಮೆಡಿಕಲ್ ಕಾಲೇಜುಗಳು, ಕೋವಿಡ್ ಸಂದರ್ಭದಲ್ಲಿ ಸಾಮಗ್ರಿ ಖರೀದಿ, ‌40./. ಕಮೀಷನ್ ಸೇರಿದಂತೆ ಹಲವು ಹಗರಣಗಳ ತನಿಖೆ ಮಾಡಲಾಗುವುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next