Advertisement

ಇನ್ನು ಮುಂದೆ ಸಕಾಲ ಪರಿಹಾರ ಆನ್‌ಲೈನ್‌ನಲ್ಲಿ

10:33 PM Apr 01, 2022 | Team Udayavani |

ಬೆಂಗಳೂರು: “ಸಕಾಲ’ ಸೇವೆ ನಿಗದಿತ ಸಮಯದಲ್ಲಿ ಸಿಗದೆ ವಿಳಂಬವಾಗಿದ್ದರೆ, ನಾಗರಿಕರು ಇನ್ನು ಮುಂದೆ ಸಕಾಲ ವೆಬ್‌ಸೈಟ್‌ ಮೂಲಕವೇ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ.

Advertisement

“ಸಕಾಲ’ ಸೇವೆಗೆ ಹತ್ತು ವರ್ಷದ ಸಂಭ್ರಮ. ನಾಳೆಗೆ (ಎ. 2) ಸಕಾಲ ಸೇವೆಗೆ 10 ವರ್ಷ ತುಂಬುತ್ತಿದ್ದು, ಈ ಹಿನ್ನೆಲೆಯಲ್ಲಿ ವೆಬ್‌ಸೈಟ್‌ ಅನ್ನು ತಾಂತ್ರಿಕವಾಗಿ ನವೀಕರಣ ಮಾಡಲಾಗುತ್ತಿದೆ. ನಾಗರಿಕರಿಗೆ ಆನ್‌ಲೈನ್‌ ಮೂಲಕವೇ ಪರಿಹಾರ ಸಿಗುವಂತೆ ಮಾಡಲಾಗುತ್ತಿದೆ.

ನವೀಕೃತ ವೆಬ್‌ಸೈಟ್‌ಗೆ ಚಾಲನೆ
ಸಕಾಲ ಸೇವೆಗೆ 10 ವರ್ಷ ತುಂಬಿದ ಸಂದರ್ಭದಲ್ಲಿ ಸಕಾಲ ವೆಬ್‌ಸೈಟ್‌ ಅನ್ನು ನವೀಕರಣ ಮಾಡಲಾಗುತ್ತಿದೆ.

ಈ ನವೀಕೃತ ವೆಬ್‌ಸೈಟ್‌ಗೆ ಸಕಾಲ ಸಚಿವ ಬಿ.ಸಿ. ನಾಗೇಶ್‌ ಎ. 4ರಂದು ಬೆಳಗ್ಗೆ 11 ಗಂಟೆಗೆ ವಿಧಾನಸೌಧದಲ್ಲಿ ಚಾಲನೆ ನೀಡಲಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next