Advertisement

ಮತ್ತೂಮ್ಮೆ ಲಾಕ್‌ ಡೌನ್‌ ಮಾಡಲ್ಲ : ಶ್ರೀರಾಮುಲು

07:08 PM Apr 17, 2021 | Team Udayavani |

ಬಳ್ಳಾರಿ : ರಾಜ್ಯದಲ್ಲಿ ಕೋವಿಡ್‌ ಸೋಂಕಿನ ಎರಡನೇ ಅಲೆ ಹೆಚ್ಚಳವಾಗಿದೆ ಎಂದು ಮತ್ತೂಮ್ಮೆ ಲಾಕ್‌ ಡೌನ್‌ ಮಾಡುವುದು ಬೇಡವೇ ಬೇಡ ಎಂದು ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ತಿಳಿಸಿದರು.

Advertisement

ಪಾಲಿಕೆ ಚುನಾವಣೆ ನಿಮಿತ್ತ ನಗರದ ವಿವಿಧ ವಾರ್ಡ್‌ಗಳಲ್ಲಿ ಶುಕ್ರವಾರ ಪ್ರಚಾರದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮತ್ತೂಮ್ಮೆ ಲಾಕ್‌ ಡೌನ್‌ ಮಾಡುವುದರಿಂದ ಯಾವುದೇ ಉಪಯೋಗವಿಲ್ಲ. ಇದರಿಂದ ಸಾಮಾನ್ಯ ಜನರಿಗೆ, ವ್ಯಾಪಾರಸ್ಥರಿಗೆ ತೊಂದರೆಯಾಗಲಿದೆ. ಮೊದಲೇ ಜನರ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ. ಅಗತ್ಯವಿದ್ದಲ್ಲಿ ರಾತ್ರಿ ಕರ್ಫ್ಯೂ  ಅನ್ನು ಎರಡ್ಮೂರು ತಾಸು ಹೆಚ್ಚಿಸಲಿ ಎಂದ ಸಚಿವ ರಾಮುಲು, ಕೋವಿಡ್‌ ಸೋಂಕು ಹೆಚ್ಚಾಗುತ್ತಿರುವ ಜಿಲ್ಲೆಗಳಿಗೆ ರಾತ್ರಿ ಕರ್ಫ್ಯೂನ್ನು ವಿಸ್ತರಿಸಲಿ ಎಂದರು.

ಲಾಕ್‌ ಡೌನ್‌ ಬೇಡ ಎಂದು ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿಕೊಂಡಿದ್ದೇನೆ. ಕೋವಿಡ್‌ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಚುನಾವಣೆಗಳು ಬಂದ ಬಳಿಕ ಕೋವಿಡ್‌ ಸೋಂಕು ಇನ್ನಷ್ಟು ಹೆಚ್ಚಾಗಿದೆ. ಪಕ್ಕದ ಮಹಾರಾಷ್ಟ್ರ ರಾಜ್ಯ, ಇನ್ನಿತರೆ ರಾಜ್ಯಗಳಿಗೆ ಹೋಲಿಕೆ ಮಾಡಿದಾಗ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಕಡಿಮೆಯಿದೆ. ಹೀಗಾಗಿ ರಾಜ್ಯದಲ್ಲಿ ಮತ್ತೂಂದು ಲಾಕ್‌ಡೌನ್‌ ಮಾಡುವುದಿಲ್ಲ ಎಂದು ಎಭಿಪ್ರಾಯ ವ್ಯಕ್ತಪಡಿಸಿದರು.

ಮಾಸ್ಕ್ ಹಾಕದ ಸಚಿವರು: ರಾಜ್ಯ ಸೇರಿ ಬಳ್ಳಾರಿ ಜಿಲ್ಲೆಯಲ್ಲೂ ಕೋವಿಡ್‌ ಸೋಂಕು ದಿನೇದಿನೆ ಹೆಚ್ಚಾಗುತ್ತಿದೆ. ಇಂಥಹ ಸಂದರ್ಭದಲ್ಲಿ ಪಾಲಿಕೆ ಚುನಾವಣೆಯಲ್ಲಿ ವಿವಿಧ ವಾಡ್‌ ìಗಳಲ್ಲಿ ಪ್ರಚಾರ ನಡೆಸುತ್ತಿರುವ ಸಮಾಜ ಕಲ್ಯಾನ ಸಚಿವ ಬಿ. ಶ್ರೀರಾಮುಲು ಅವರು ಮಾಸ್ಕ್ ಇಲ್ಲದೇ ಪ್ರಚಾರದಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ತೊಡಗಿಸಿಕೊಳ್ಳುತ್ತಿದ್ದು, ಈ ಹಿಂದೆ ಆರೊಗ್ಯ ಖಾತೆಯನ್ನೂ ನಿಭಾಯಿಸಿದ್ದ ಸಚಿವರಿಂದಲೇ ಕೋವಿಡ್‌ ನಿಯಮ ಉಲ್ಲಂಘನೆಯಾದಂತಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next