Advertisement

ಒಂದೇ ದಿನ 21 ಜನರಿಗೆ ಸೋಂಕು: ದಾವಣಗೆರೆ ನಗರದಲ್ಲಿ ಮದ್ಯ ಮಾರಾಟಕ್ಕೆ ಅವಕಾಶವಿಲ್ಲ

08:24 AM May 05, 2020 | keerthan |

ದಾವಣಗೆರೆ: ರಾಜ್ಯದ ಎಲ್ಲೆಡೆ ಇಂದು ಮದ್ಯದಂಗಡಿಗಳು ಅರಂಭವಾಗುತ್ತಿದ್ದರೆ, ದಾವಣಗೆರೆ ನಗರದಲ್ಲಿ ಎಲ್ಲಾ ಮದ್ಯದಂಗಡಿಗಳು ಮುಚ್ಚಿದೆ. ರವಿವಾರ ಒಂದೇ ದಿನ 21 ಕೋವಿಡ್-19 ಪಾಸಿಟಿವ್ ಪ್ರಕರಣಗಳು ಕಂಡು ಬಂದ ಹಿನ್ನಲೆಯಲ್ಲಿ ಈ ನಿರ್ಧಾರ ಮಾಡಲಾಗಿದೆ.

Advertisement

ದಾವಣಗೆರೆ ನಗರದಲ್ಲಿ ಮದ್ಯ ಮಾರಾಟ ಬಂದ್.ಮಾಡಲಾಗಿದ್ದು, ದಾವಣಗೆರೆ ಗ್ರಾಮಾಂತರ ಸೇರಿದಂತೆ ಉಳಿದ ತಾಲ್ಲೂಕುಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ.

ಸೋಂಕು ಕಂಡು ಬಂದ ಹಿನ್ನಲೆಯಲ್ಲಿ ಅಬಕಾರಿ ಇಲಾಖೆಯಿಂದ ಕ್ರಮ ಕೈಗೊಳ್ಳಲಾಗಿದೆ. ದಾವಣಗೆರೆ ನಗರದಲ್ಲಿರುವ 100ಕ್ಕೂ ಹೆಚ್ಚು ಮದ್ಯದಂಗಡಿ ಗಳಲ್ಲಿ ಇಂದು ಎಣ್ಣೆ ವ್ಯಾಪಾರ ನಡೆಸುವಂತಿಲ್ಲ.

ರಾಜ್ಯದಲ್ಲಿ ಸರಕಾರ ಮದ್ಯದಂಗಡಿ ತೆರೆಯಲು ಅನುಮತಿ ನೀಡಿದ್ದು, ಇಂದು ಬೆಳಗ್ಗೆ ಯಿಂದ ವ್ಯಾಪಾರ ಆರಂಭವಾಗಿದೆ. ಜನರು ಮೊದಲೇ ಕ್ಯೂ ನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಕಾದು ನಿಂತಿದ್ದು ಕಂಡುಬಂತು

Advertisement

Udayavani is now on Telegram. Click here to join our channel and stay updated with the latest news.

Next