Advertisement

Politics: “ವಿಪಕ್ಷಗಳ ಸಭೆಗೆ ಆಹ್ವಾನ ಇರಲಿಲ್ಲ”: ಮಮತಾ ಬ್ಯಾನರ್ಜಿ 

12:28 AM Dec 07, 2023 | Team Udayavani |

ಹೊಸದಿಲ್ಲಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಆಯೋಜಿಸಲು ಯೋಜಿಸಿದ್ದ ವಿಪಕ್ಷಗಳ ಒಕ್ಕೂಟದ ಸಭೆಯ ಬಗ್ಗೆ ನನಗೆ ಯಾರೂ ತಿಳಿಸಿಯೇ ಇರಲಿಲ್ಲ ಎಂದು ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಬುಧವಾರ ನಡೆಯಬೇಕಿದ್ದ ಇಂಡಿಯಾ ಒಕ್ಕೂಟದ ಸಭೆಯನ್ನು ಡಿ. 17ಕ್ಕೆ ಮುಂದೂಡಲಾಗಿದೆ.

Advertisement

ಈ ಕುರಿತಂತೆ ಕೋಲ್ಕತಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳು ಮಮತಾ ಅವರನ್ನು ಪ್ರಶ್ನಿಸಿದ್ದವು. ಉತ್ತರಿಸಿದ ಅವರು, ಸಭೆಗೆ 2 ದಿನಗಳ ಮುಂಚಿತವಾಗಿ ರಾಹುಲ್‌ ಗಾಂಧಿ ಅವರು ನನಗೆ ಕರೆ ಮಾಡಿದ್ದರು. ಆಗ ಸಭೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಈ ಹಿನ್ನೆಲೆಯಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇನೆ ಎಂದು ತಿಳಿಸಿದ್ದೆ. ಈಗ ಸಭೆಯನ್ನು ಮುಂದೂಡಲಾಗಿದೆ ಅದರಲ್ಲಿ ಭಾಗಿಯಾಗುತ್ತೇವೆ. ಆದರೆ ಪ್ರತಿಯೊಬ್ಬ ವಿಪಕ್ಷಗಳ ನಾಯಕರಿಗೂ ಕನಿಷ್ಠ 8 ರಿಂದ 10 ದಿನಗಳ ಮುಂಚೆ ಮಾಹಿತಿ ನೀಡಬೇಕು ಎಂದು ಮಮತಾ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next