Advertisement

ಹೊಸ ಪಕ್ಷ ಸ್ಥಾಪಿಸುವ ಅಗತ್ಯ ತತ್‌ಕ್ಷಣಕ್ಕೆ ಇಲ್ಲ: ದಿನಕರನ್‌

05:10 PM Jan 17, 2018 | udayavani editorial |

ಉದಕಮಂಡಲ, ತಮಿಳು ನಾಡು : ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸುವ ಅಗತ್ಯ ಈ ಕ್ಷಣಕ್ಕೆ ಇಲ್ಲ ಎಂದು ಬದಿಗೊತ್ತಲ್ಪಟ್ಟಿರುವ ಎಐಎಡಿಎಂಕೆ ನಾಯಕ ಟಿ ಟಿ ವಿ ದಿನಕರನ್‌ ಹೇಳಿದ್ದಾರೆ.

Advertisement

ಎಐಎಡಿಎಂಕೆ (ಅಮ್ಮ) ಹೆಸರಿನಲ್ಲಿ ತನ್ನ ಬಣವು ಕಾರ್ಯವೆಸಗುವುದಕ್ಕೆ ಅನುಮತಿ ನೀಡಬೇಕೆಂದು ಕೋರಿ ತಾನು ಕೋರ್ಟಿಗೆ ಹೋಗುವೆ ಎಂದವರು ಹೇಳಿದರು. 

ಪಕ್ಷದ ಮಧ್ಯಂತರ ಪ್ರಧಾನ ಕಾರ್ಯದರ್ಶಿಯಾಗಿ ವಿ ಕೆ ಶಶಿಕಲಾ ಅವರ ನೇಮಕಾತಿಯನ್ನು ರದ್ದು ಮಾಡಿರುವ ಎಐಎಡಿಎಂಕೆ ಜನರಲ್‌ ಕೌನ್ಸಿಲ್‌ ಸಭೆಯ ಸಿಂಧುತ್ವವನ್ನು ತಾನು ಈಗಾಗಲೇ ಮದ್ರಾಸ್‌ ಹೈಕೋರ್ಟ್‌ ನಲ್ಲಿ ಪ್ರಶ್ನಿಸಿದ್ದು ಅದೀಗ ಇತ್ಯರ್ಥಕ್ಕೆ ಬಾಕಿ ಇದೆ ಎಂದು ದಿನಕರನ್‌ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next