Advertisement

ಪತ್ನಿ ದೂರು ಕೊಟ್ಟ ತತ್‌ಕ್ಷಣ ಪತಿಯನ್ನು ಬಂಧಿಸುವಂತಿಲ್ಲ!

08:50 AM Jul 28, 2017 | Karthik A |

ಹೊಸದಿಲ್ಲಿ: ‘ಪತಿ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾನೆ ಎಂದು ಪತ್ನಿ ದೂರು ನೀಡಿದ ತತ್‌ಕ್ಷಣವೇ ಪೊಲೀಸರು ಬಂಧಿಸುವಂತಿಲ್ಲ’ ಎಂದು ಸುಪ್ರೀಂಕೋರ್ಟ್‌ ತೀರ್ಪು ನೀಡಿದೆ. 2014ರಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪನ್ನು ಎತ್ತಿಹಿಡಿದಿರುವ ಮುಖ್ಯ ನ್ಯಾ| ಜೆ.ಎಸ್‌.ಖೇಹರ್‌ ನೇತೃತ್ವದ ಪೀಠ ವರದಕ್ಷಿಣೆ ಕಿರುಕುಳ ಕಾನೂನನ್ನು ‘ಗುರಾಣಿ’ಯಂತೆ ಬಳಸುವ ಬದಲು, ಪತಿ ವಿರುದ್ಧದ ‘ಆಯುಧ’ವನ್ನಾಗಿ ಬಳಸುವ ಪ್ರಕರಣಗಳೇ ಹೆಚ್ಚಾಗಿವೆ. ಪತಿ ವಿರುದ್ಧ ಪ್ರಾಥಮಿಕ ತನಿಖೆ ನಡೆಸಿ, ಆತನ ಮೇಲಿನ ಆರೋಪ ಸಾಬೀತು ಮಾಡುವ ಸಾಕ್ಷ್ಯ ದೊರೆತ ಅನಂತರವಷ್ಟೇ ಬಂಧಿಸಬೇಕು,’ ಎಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next