Advertisement

ಚುನಾವಣೆಯಲ್ಲಿ ಅಕ್ರಮ ನಡೆದಿಲ್ಲ  

05:57 PM Feb 05, 2021 | Team Udayavani |

ಪಾವಗಡ: ಯೂತ್‌ ಕಾಂಗ್ರೆಸ್‌ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಗ್ರಾಮಾಂತರ ಯೂತ್‌ ಕಾಂಗ್ರೆಸ್‌ ಉಪಾಧ್ಯಕ್ಷರಾದ ರಘುವೀರರೆಡ್ಡಿ ಅರೋಪಗಳು ಸುಳ್ಳು ಎಂದು ಗ್ರಾಮಾಂತರ ಯೂತ್‌ ಕಾಂಗ್ರೆಸ್‌ ಅಧ್ಯಕ್ಷರಾದ ಸುಜೀತ್‌ ಕುಮಾರ್‌ ತಿಳಿಸಿದರು.

Advertisement

ಕಾಂಗ್ರೆಸ್‌ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶಾದ್ಯಂತ ಯೂತ್‌ ಕಾಂಗ್ರೆಸ್‌ ಚುನಾವಣೆ ನಡೆದಿದೆ. ಕೆಲತಾಂತ್ರಿಕ  ದೋಷಗಳಿಂದ ಕೆಲವರು ಹೆಸರು ಬಂದಿಲ್ಲ. ಅಷ್ಟು ಬಿಟ್ಟರೆ ಯಾವುದೇ ರೀತಿಯ ಅಕ್ರಮ ನಡೆದಿಲ್ಲ ಶಾಸಕರಾದ ವೆಂಕಟರಮಣಪ್ಪ, ಪಟ್ಟಣಾಧ್ಯಕ್ಷರಾದ ಸುದೇಶ್‌ಬಾಬು,ಗ್ರಾಮಾಂತರ ಅಧ್ಯಕ್ಷರಾದ ವೆಂಕಟೇಶ್‌ ಅವರ ಮಾರ್ಗದರ್ಶನದಲ್ಲಿ ಪಕ್ಷವನ್ನು ಬಲಪಡಿಸುವ ದೃಷ್ಟಿಯಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದರು.

ಇದನ್ನೂ ಓದಿ :25 ಕೆ.ಜಿ. ನಿಷೇಧಿತ ಪ್ಲಾಸ್ಟಿಕ್ ವಶ :ದಂಡ

ಪಟ್ಟಣ ಕಾಂಗ್ರೆಸ್‌ ಯೂತ್‌ ಅಧ್ಯಕ್ಷ ಮಹೇಶ್‌, ಉಪಾಧ್ಯಕ್ಷ ಮಣಿ, ಯೂತ್‌ ಕಾಂಗ್ರೆಸ್‌ ಮುಖಂಡರಾದ ವಿಜಯಭಾಸ್ಕರ್‌, ಅವಿನಾಶ್‌, ಶಿವಶಂಕರ್‌, ಹನುಮೇಶ್‌ ಯಾದವ್‌, ಅನಿಲ್‌, ಶ್ಯಾಮ್‌, ಜಗದೀಶ್‌, ಬಾಲಾಜಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next