Advertisement

ಶಾ ಔತಣ ಕೂಟದಲ್ಲಿ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆಯಾಗಲಿಲ್ಲ: ಶೆಟ್ಟರ್

03:33 PM May 03, 2022 | Team Udayavani |

ಬೆಂಗಳೂರು: ಸಿಎಂ ನಿವಾಸದಲ್ಲಿ ನಡೆದ ಔತಣ ಕೂಟದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನಮ್ಮ ಜೊತೆ ಕುಳಿತು ಮಾತುಕತೆ ನಡೆಸಿದರು. ನಮ್ಮ ನಾಯಕರ ಜೊತೆ ಊಟ ಮಾಡಿದರಷ್ಟೇ. ಆದರೆ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆಯಾಗಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.

Advertisement

ಔತಣಕೂಟದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಶೆಟ್ಟರ್ ಗೆ ಧಾರವಾಡ ಪೇಡ ಸಿಗುತ್ತದೆಯೇ’ ಎಂಬ ಪ್ರಶ್ನೆಗೆ ಉತ್ತರಿಸಿ, ನಾನು ಹಾಗೇನು‌ ತಿಳಿದುಕೊಂಡಿಲ್ಲ. ಅದನ್ನು ನೀವೇ ಹೇಳುತ್ತಿರುವುದು ಎಂದರು.

ದೆಹಲಿಯಲ್ಲಿ ವರಿಷ್ಠರು ಶೆಟ್ಟರ್ ಗೆ ಸಿಗುತ್ತಾರೆ, ಸಿಎಂಗೆ ಸಿಗುವುದಿಲ್ಲವಲ್ಲ ಎಂಬ ಪ್ರಶ್ಮೆಗೆ ಪ್ರತಿಕ್ರಿಯೆ ನೀಡಿ, ಅದು ಹಳೆಯ ವಿಷಯ. ಇವತ್ತು ಸರ್ಕಾರಿ ಕಾರ್ಯಕ್ರಮವಿದೆ. ಅದಕ್ಕೆ ಬಂದಿದ್ದರು. ಇಲ್ಲಿ ಭೊಜನಕ್ಕೆ ಬಂದಿದ್ದಾರೆ, ಸಂಜೆ ಕೂಡ ಕಾರ್ಯಕ್ರಮವಿದೆ. ಅಲ್ಲಿಗೂ ಅವರು ಹೋಗುತ್ತಾರೆ. ಇಲ್ಲಿ ಸಂಪುಟ ವಿಚಾರದ ಬಗ್ಗೆ ಚರ್ಚೆಯಾಗಿಲ್ಲ ಎಂದರು.

ಇದನ್ನೂ ಓದಿ:ಕಾಂಗ್ರೆಸ್ ನಾಯಕರು ಷಡ್ಯಂತ್ರ ನಡೆಸುವಲ್ಲಿ ನಿರತರಾಗಿದ್ದಾರೆ: ಅರುಣ್ ಸಿಂಗ್

ಸಿಎಂ ಬದಲಾವಣೆ ಬಗ್ಗೆ ಯತ್ನಾಳ್ ಹೇಳಿಕೆ ವಿಚಾರಕ್ಕೆ ಅದನ್ನು ನೀವು ಯತ್ನಾಳರನ್ನೇ ಕೇಳಬೇಕು ಎಂದು ಜಗದೀಶ್ ಶೆಟ್ಟರ್ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next