Advertisement

‘ಅಭಿವೃದ್ಧಿಯಲ್ಲಿ ತಾರತಮ್ಯವಿಲ್ಲ ‘

01:32 AM Jun 25, 2019 | Sriram |

ಕೃಷ್ಣಾಪುರ: ಮಂಗಳೂರು ಉತ್ತರ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡುವಾಗ ಎಲ್ಲ ಕ್ಷೇತ್ರಗಳನ್ನು ಸಮಾನವಾಗಿ ಕಂಡು ಅಭಿವೃದ್ಧಿ ಮಾಡಲಾಗುವುದು ಎಂದು ಶಾಸಕ ಡಾ| ಭರತ್‌ ಶೆಟ್ಟಿ ವೈ. ಹೇಳಿದರು.

Advertisement

ಕೃಷ್ಣಾಪುರದಲ್ಲಿ ಅಲ್ಪಸಂಖ್ಯಾಕ ಮೂಲ ಸೌಕರ್ಯಗಳ ನಿಧಿಯಿಂದ ಕಾಟಿಪಳ್ಳ ಸಿವೈಸಿ ಹಬೀಬ್‌ ಮನೆ ಮುಂಭಾಗದ ರಸ್ತೆ ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಕಾಂಕ್ರೀಟ್ ರಸ್ತೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸರಕಾರದಿಂದ ಸಿಗುವ ಸೌಲಭ್ಯವನ್ನು ಮತದಾರರಿಗೆ ತಲುಪಿಸಲು ಬದ್ಧನಿದ್ದೇನೆ. ಈಗಾಗಲೇ ಸರಕಾರದ ವಿವಿಧ ಇಲಾಖೆಯ ಅಡಿ ಸಿಗುವ ಅನುದಾನವನ್ನು ಬಿಡುಗಡೆ ಮಾಡಿಸಿ ಕಾಮಗಾರಿ ಮಾಡಲಾಗಿದೆ ಎಂದರು.

ಈ ಸಂದರ್ಭ ಮನಪಾ ಸದಸ್ಯ ತಿಲಕ್‌ ರಾಜ್‌ ಕೃಷ್ಣಾಪುರ, ಲೋಕೇಶ್‌ ಬೊಳ್ಳಾಜೆ, ಅಶೋಕ್‌ ಕೃಷ್ಣಾಪುರ, ಸಿವೈಸಿ ಹಬೀಬ್‌, ಸತೀಶ್‌ ಆಚಾರ್ಯ ಕಾಟಿಪಳ್ಳ, ಶೇಖರ್‌ ದೇವಾಡಿಗ, ಅಬ್ದುಲ್ ಸತ್ತಾರ್‌, ಸಾಲಿ ಮುಲ್ಲರಪಟ್ನ, ಮೊಹಮ್ಮದ್‌ ತಮೀಮ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next