Advertisement

ಕರ್ಫ್ಯೂ ಇಲ್ಲ, ಸುಡುಗಾಡು ಇಲ್ಲ: ಸರಕಾರಕ್ಕೆ ಮುಜುಗರ ತಂದಿಟ್ಟ ಈಶ್ವರಪ್ಪ

07:15 PM Jan 06, 2022 | Team Udayavani |

ಬೆಂಗಳೂರು : ಶಿವಮೊಗ್ಗದಲ್ಲಿ ನಾನು 3 ದಿನ ಇದ್ದೆ, ಅಲ್ಲಿ ನೈಟ್ ಕರ್ಫ್ಯೂ ಇಲ್ಲ ಸುಡುಗಾಡು ಇಲ್ಲ ಎಂದು ಸಚಿವ ಈಶ್ವರಪ್ಪ ಹೇಳಿಕೆ ನೀಡಿ ಸರಕಾರವನ್ನು ಮತ್ತೆ ಮುಜುಗರಕ್ಕೆ ಸಿಲುಕಿಸಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ರಾಜ್ಯದಲ್ಲಿ ಒಂದೇ ರೀತಿ ನಿಯಮ ಇಲ್ಲ. ಶಿವಮೊಗ್ಗ ದಲ್ಲಿ ನಾನು 3 ದಿನ ಇದ್ದೆ ಅಲ್ಲಿ ನೈಟ್ ಕರ್ಫ್ಯೂ ಇಲ್ಲ, ಸುಡುಗಾಡು ಇಲ್ಲ ಎಂದರು.

ಪ್ರಕರಣ ಹೆಚ್ಚು ಇರುವ ಕಡೆ ಬಿಗಿ ನಿಯಮ ಮಾಡಿ. ಬೇರೆ ಕಡೆ ಬಿಡಿ. ಇದು ಜನರ ಭಾವನೆ. ಈ ಬಗ್ಗೆ ಮುಖ್ಯಮಂತ್ರಿ ಜತೆ ಮಾತನಾಡುತ್ತೇನೆ ಎಂದಿದ್ದಾರೆ.

ರಾಜ್ಯವ್ಯಾಪಿ ರಾತ್ರಿ ಕರ್ಫ್ಯೂ ಗೆ ವಿರೋಧ ವ್ಯಕ್ತಪಡಿಸಿದ್ದ ಈಶ್ವರಪ್ಪ ಬೆಂಗಳೂರಿನಲ್ಲಿ ನಿಯಮ ಬಿಗಿ ಇರಲಿ ಕೋವಿಡ್ ಕಡಿಮೆ ಇರುವಲ್ಲಿ ಬಿಗಿ ನಿಯಮ ಬೇಡ ಎಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next