Advertisement

ಆಗಸ್ಟ್‌ ತನಕ ಕ್ರಿಕೆಟ್‌ ಶಿಬಿರ ಇಲ್ಲ: ಸೌರವ್‌ ಗಂಗೂಲಿ

02:18 AM Jun 30, 2020 | Sriram |

ಹೊಸದಿಲ್ಲಿ: ಭಾರತೀಯ ಕ್ರಿಕೆಟಿಗರ ಅಭ್ಯಾಸ ಶಿಬಿರವನ್ನು ಆಗಸ್ಟ್‌ ತನಕ ಏರ್ಪಡಿಸಲು ಸಾಧ್ಯವಿಲ್ಲ ಎಂಬುದಾಗಿ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಹೇಳಿದ್ದಾರೆ. ಇದರಿಂದ ಭಾರತದ ಕ್ರಿಕೆಟ್‌ ಋತು ಸದ್ಯದಲ್ಲಿ ಆರಂಭವಾಗುವ ಯಾವುದೇ ಸಾಧ್ಯತೆ ಇಲ್ಲವಾಗಿದೆ.

Advertisement

“ಕೋವಿಡ್‌-19 ಇನ್ನೂ ನಿಯಂತ್ರಣಕ್ಕೆ ಬಾರದ ಕಾರಣ ಭಾರತದ ಕ್ರಿಕೆಟಿಗರಿಗೆ ಅಭ್ಯಾಸ ಶಿಬಿರವನ್ನು ಏರ್ಪಡಿಸುವ ಸಾಧ್ಯತೆ ಸದ್ಯಕ್ಕಿಲ್ಲ. ಆಗಸ್ಟ್‌ ಬಳಿಕವೇ ಈ ಬಗ್ಗೆ ಯೋಚಿಸಬೇಕಾಗುತ್ತದೆ’ ಎಂದು ಗಂಗೂಲಿ ಹೇಳಿದರು.

ಸದ್ಯ ಶ್ರೇಯಸ್‌ ಅಯ್ಯರ್‌, ಚೇತೇಶ್ವರ್‌ ಪೂಜಾರ ಮತ್ತು ರೋಹಿತ್‌ ಮಾತ್ರ ಅಭ್ಯಾಸ ಆರಂಭಿಸಿದ್ದಾರೆ. ಉಳಿದವರು ಲಾಕ್‌ಡೌನ್‌ ಅವಧಿಯನ್ನು ಕುಟುಂಬದವರೊಂದಿಗೆ ಕಳೆಯುತ್ತಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next