Advertisement

ಚಿದಂಬರಂಗೆ ಜಾಮೀನು ಬೇಡವೇ ಬೇಡ: ಸಿಬಿಐ

01:32 AM Sep 21, 2019 | mahesh |

ಹೊಸದಿಲ್ಲಿ: ಐಎನ್‌ಎಕ್ಸ್‌ ಪ್ರಕರಣದಲ್ಲಿ ಮಾಜಿ ಸಚಿವ ಪಿ. ಚಿದಂಬರಂಗೆ ಜಾಮೀನು ಕೊಡಲೇಬಾರದು ಎಂದು ಸಿಬಿಐ ದಿಲ್ಲಿ ಹೈಕೋರ್ಟ್‌ ನಲ್ಲಿ ಒತ್ತಾಯಿಸಿದೆ. ಇದೊಂದು ಅತ್ಯಂತ ಗಂಭೀರ ಆರ್ಥಿಕ ಅಪರಾಧವಾಗಿದೆ. ಹೀಗಾಗಿ, ಅವ ರಿಗೆ ಜಾಮೀನು ನೀಡಿದರೆ ತನಿ ಖೆಯ ಮೇಲೆ ಪ್ರಭಾವ ಬೀರಲಿದೆ ಎಂದು ಹೈಕೋರ್ಟ್‌ಗೆ ಅರಿಕೆ ಮಾಡಿದೆ. ಇದೊಂದು ಸಾರ್ವ ಜನಿಕ ನಂಬಿಕೆ ಮೇಲೆ ಬರೆ ಎಳೆದ ಪ್ರಕರಣ ಇದಾಗಿದೆ ಎಂದಿದೆ. ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಗಳು ಕೇವಲ ದುರುದ್ದೇಶದಿಂದ ಕೂಡಿದೆ. ಜತೆಗೆ ರಾಜಕೀಯ ಪ್ರತೀಕಾರ ತೀರಿಸುವ ಉದ್ದೇಶದ್ದಾಗಿದೆ ಎಂದು ಚಿದು ತಮ್ಮ ಜಾಮೀನು ಅರ್ಜಿಯಲ್ಲಿ ವಾದಿಸಿದ್ದಾರೆ.

Advertisement

ಐಎನ್‌ಎಕ್ಸ್‌ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಆ. 23ರಂದು ಹೊಸದಿಲ್ಲಿಯಲ್ಲಿ ಸಿಬಿಐ ಬಂಧಿಸಿತ್ತು. ಸದ್ಯ ಅವರನ್ನು ಅ. 3ರ ವರೆಗೆ ನ್ಯಾಯಾಂಗ ವಶಕ್ಕೆ ಒಪ್ಪಿಸಿ ವಿಶೇಷ ಕೋರ್ಟ್‌ ಈಗಾಗಲೇ ಆದೇಶ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next