Advertisement

ವೈದ್ಯರ ಚೀಟಿ ಇಲ್ಲದೇ ಔಷಧ ವಿತರಿಸಿದರೆ ಪರವಾನಗಿ ರದ್ದು 

10:41 PM Dec 22, 2022 | Team Udayavani |

ತಿರುವನಂತಪುರ: ವೈದ್ಯರ ಚೀಟಿ ಇಲ್ಲದೇ ಔಷಧ ವಿತರಿಸುವ ರೀಟೆಲ್‌ ಔಷಧ ವ್ಯಾಪಾರಿಗಳ ಪರವಾನಗಿ ರದ್ದುಪಡಿಸಲು ಕೇರಳ ಸರ್ಕಾರ ನಿರ್ಧರಿಸಿದೆ.

Advertisement

ಆ್ಯಂಟಿ ಮೈಕ್ರೋಬಿಯಲ್‌(ಸೂಕ್ಷ್ಮಜೀವಿಗಳ ನಿಗ್ರಹ) ಔಷಧಗಳ ಅತಿಯಾದ ಬಳಕೆ ಮತ್ತು ದುರ್ಬಳಕೆ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ.

ರಾಜ್ಯದಲ್ಲಿ ತನ್ನ ಆಂಟಿ ಮೈಕ್ರೊಬಿಯಲ್‌ ರೆಸಿಸ್ಟೆನ್ಸ್‌(ಎಎಂಆರ್‌) ಚಟುವಟಿಕೆಗಳನ್ನು ಬಲಪಡಿಸುವ ಭಾಗವಾಗಿ ರಾಜ್ಯದ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಆಂಟಿಬಯೋಟಿಕ್‌ ಸ್ಮಾರ್ಟ್‌ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನಾಗಿ ಮಾಡಲು ಕೇರಳ ಸರ್ಕಾರವು ಇದೇ ವೇಳೆ ಹಲವು ಕ್ರಮಗಳನ್ನು ಘೋಷಿಸಿದೆ. ಎಎಂಆರ್‌ ಕುರಿತು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲೂಎಚ್‌ಒ) ಕೂಡ ಆತಂಕ ವ್ಯಕ್ತಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next