Advertisement

BJP ಜತೆಗಿಲ್ಲ ಮೈತ್ರಿ: ಫ‌ಡ್ನವೀಸ್‌ ಮಾತು ಸುಳ್ಳು- NCP ಸಂಸ್ಥಾಪಕ ಶರದ್‌ ಪವಾರ್‌ ಘೋಷಣೆ

10:38 PM Oct 04, 2023 | Team Udayavani |

ಮುಂಬೈ: ಮಹಾರಾಷ್ಟ್ರದಲ್ಲಿ ಬಿಜೆಪಿ ಜತೆಗೆ ಎನ್‌ಸಿಪಿ ಸೇರಿಕೊಳ್ಳುವ ಪ್ರಶ್ನೆಯೇ ಇಲ್ಲ. ಈ ಬಗ್ಗೆ ಡಿಸಿಎಂ ದೇವೇಂದ್ರ ಫ‌ಡ್ನವಿಸ್‌ ಹೇಳಿರುವುದೆಲ್ಲ ಸುಳ್ಳು ಎಂದು ಎನ್‌ಸಿಪಿ ಸಂಸ್ಥಾಪಕ ಶರದ್‌ ಪವಾರ್‌ ಹೇಳಿದ್ದಾರೆ. ಮುಂಬೈನಲ್ಲಿ “ಇಂಡಿಯಾ ಟುಡೇ’ ಟಿವಿ ವತಿಯಿಂದ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗಾಗಲೇ ಬಿಜೆಪಿಗೆ ಸೇರಿರುವ ಪಕ್ಷದ ನಾಯಕರಿಗೂ ಎನ್‌ಸಿಪಿಗೂ ಸಂಬಂಧವೇ ಇಲ್ಲ ಎಂದು ತಮ್ಮ ಸೋದರಳಿಯ ಅಜಿತ್‌ ಪವಾರ್‌ ಅವರನ್ನು ಉಲ್ಲೇಖೀಸಿ ಶರದ್‌ ಹೇಳಿದ್ದಾರೆ. ಅವರ ವಿರುದ್ಧ ಕೆಲವೊಂದು ಆರೋಪಗಳಿವೆ. ತನಿಖಾ ಸಂಸ್ಥೆಗಳಿಗೆ ಹೆದರಿ ಆ ಪಕ್ಷಕ್ಕೆ ಸೇರಿದ್ದಾರೆ ಎಂದರು.

Advertisement

ರಾಹುಲ್‌ ಗಾಂಧಿಯವರ ಬಗ್ಗೆ ಮಾತನಾಡಿದ ಪವಾರ್‌ “ಭಾರತ್‌ ಜೋಡೋ ಯಾತ್ರೆಯನ್ನು ಅವರು ಗಂಭೀರವಾಗಿ ಪರಿಗಣಿಸಿದ್ದಾರೆ. ಒಂದಲ್ಲ ಒಂದು ದಿನ ರಾಹುಲ್‌ ಗಾಂಧಿ ದೇಶವನ್ನು ಮುನ್ನಡೆಸಲಿದ್ದಾರೆ’ ಎಂದರು.

ರಾಷ್ಟ್ರಪತಿ ಆಡಳಿತಕ್ಕೆ ಪವಾರ್‌ ಸಹಮತ ಇತ್ತು 
2019ರಲ್ಲಿ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸುವುದಕ್ಕೆ ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಬೆಂಬಲ ಇತ್ತು ಎಂದು ಡಿಸಿಎಂ ದೇವೇಂದ್ರ ಫ‌ಡ್ನವೀಸ್‌ ಹೇಳಿದ್ದಾರೆ. ಮುಂಬೈನಲ್ಲಿ ಮಾತನಾಡಿದ ಅವರು, 2019ರಲ್ಲಿ ಶರದ್‌ ಪವಾರ್‌ ಬಿಜೆಪಿ ಜತೆಗೆ ಸೇರಿಕೊಂಡು ಸರ್ಕಾರ ರಚಿಸಲು ಮುಂದಾಗಿದ್ದರು. ಜತೆಗೆ ಯಾರಿಗೆ ಯಾವ ಖಾತೆ ಎಂಬ ಅಂಶವೂ ತೀರ್ಮಾನವಾಗಿತ್ತು. ಅಂತಿಮವಾಗಿ ಪವಾರ್‌ ನಿಲುವು ಬದಲಾಯಿಸಿಕೊಂಡರು ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next