Advertisement

ಪಿಂಚಣಿ ಪಡೆಯಲು ಆಧಾರ್‌ ಬೇಡ

06:50 AM May 16, 2018 | Team Udayavani |

ನವದೆಹಲಿ: ಕೇಂದ್ರ ಸರ್ಕಾರ ಉದ್ಯೋಗಿಗಳಿಗೆ ಸಿಹಿ ಸುದ್ದಿ ಇಲ್ಲಿದೆ. ಪಿಂಚಣಿ ಬೇಕಾಗಿದ್ದರೆ ಆಧಾರ್‌ ಕಡ್ಡಾಯ
ವೇನಲ್ಲ ಎಂದು ಕೇಂದ್ರ ಸಿಬ್ಬಂದಿ ಖಾತೆ ಸಹಾಯಕ ಸಚಿವ ಜಿತೇಂದ್ರ ಸಿಂಗ್‌ ಹೇಳಿದ್ದಾರೆ. 

Advertisement

ಪಿಂಚಣಿ ಪಡೆಯಲೋಸುಗ ಆಧಾರ್‌ ಕಡ್ಡಾಯ ಮಾಡಿಯೇ ಇಲ್ಲ ಎಂದು ಹೇಳಿರುವ ಅವರು ಕೇವಲ ವಯೋಮಿತಿ ತಿಳಿದುಕೊಳ್ಳುವ ನಿಟ್ಟಿನಲ್ಲಿ ಆಧಾರ್‌ ಅನ್ನು ತಾಂತ್ರಿಕವಾಗಿ ಬಳಕೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ನವದೆಹಲಿಯಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಅವರು ಈ ವಿಷಯ ಪ್ರಸ್ತಾಪಿಸಿದ್ದಾರೆ. ಕೇಂದ್ರ ಸರ್ಕಾರ ತನ್ನ ಉದ್ಯೋಗಿಗಳಿಗಾಗಿ ಮತ್ತು ಪಿಂಚಣಿದಾರರಿಗಾಗಿ ಹಲವು ಕಲ್ಯಾಣ ಕಾರ್ಯಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next