Advertisement

ಮಣಿಪಾಲ ಬಸ್‌ಸ್ಟ್ಯಾಂಡ್ ನ‌ಲ್ಲೇ ಈಜಿದ ಉಡುಪಿಯ ವಾಟಾಳ್‌! Watch

01:35 PM Aug 08, 2017 | |

ಮಣಿಪಾಲ: ಇಲ್ಲಿನ ಹೃದಯ ಭಾಗದಲ್ಲಿರುವ ಸ್ಟ್ಯಾಂಡ್ ಅಕ್ಷರಶಃ ಕೆರೆ.ರಾಷ್ಟ್ರೀಯ ಹೆದ್ದಾರಿಯ ದುಸ್ಥಿತಿಯನ್ನು ಖಂಡಿಸಿ ಉಡುಪಿ ನಾಗರಿಕ ವೇದಿಕೆಯ ನಿತ್ಯಾನಂದ ವಳಕಾಡು ಅವರು ಮಂಗಳವಾರ ವಿಭಿನ್ನವಾಗಿ ಪ್ರತಿಭಟನೆ ನಡೆಸಿ ಗಮನಸೆಳೆದರು. 

Advertisement

ವಾಟಾಳ್‌ ನಾಗರಾಜ್‌ ಅವರಂತೆ ವಿಭಿನ್ನ ಮಾದರಿಯ ಪ್ರತಿಭಟನೆ ನಡೆಸಿ ಉಡುಪಿಯ ವಾಟಾಳ್‌ ಎಂದು ಕರೆಸಿಕೊಳ್ಳುವ ನಿತ್ಯಾನಂದ ಒಳಕಾಡು ಅವರು ಬಸ್‌ಸ್ಟ್ಯಾಂಡ್ ನ‌ಲ್ಲಿರುವ ರಸ್ತೆಗುಂಡಿಯಲ್ಲಿ ಈಜಾಡುವ ಅಣಕ ಪ್ರದರ್ಶಿಸಿ ಆಕ್ರೋಶ ವ್ಯಕ್ತ ಪಡಿಸಿದರು. ಅವರ ಬೆಂಬಲಿಗರೊಬ್ಬರು ಗಾಳ ಹಾಕಿ ಮೀನು ಹೀಡಿದಂತೆ ಅಣಕ ಪ್ರದರ್ಶಿಸಿದರು.

ನಿತ್ಯಾನಂದ ಅವರ ವಿಭಿನ್ನ ಪ್ರತಿಭಟನೆಯ ವಿಡಿಯೋ ವೈರಲ್‌ ಆಗಿದ್ದು, ಅಪಾರ ಜನ ಪ್ರಶಂಸೆ ವ್ಯಕ್ತ ಪಡಿಸಿದ್ದು , ಈ ಪ್ರತಿಭಟನೆ ಸಂಬಂಧ ಪಟ್ಟವರಿಗೆ ತಲುಪಿ ಅಂತರಾಷ್ಟ್ರೀಯ ವಿದ್ಯಾರ್ಥಿಗಳು ಇರುವ ಸುಶಿಕ್ಷಿತರ ಪಟ್ಟಣ ಮಣಿಪಾಲದ ರಸ್ತೆಯ ಸ್ಥಿತಿ ಬದಲಾಗಬೇಕು ಎಂದು ಹೇಳಿಕೊಂಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next