Advertisement

ಕೋಸ್ಟಲ್‌ವುಡ್‌ನ‌ಲ್ಲಿ ಇನ್ನು ಮುಂದೆ “ನಿತ್ಯ ಪ್ರಕಾಶ’!

11:02 PM Dec 18, 2019 | Team Udayavani |

ಕೋಸ್ಟಲ್‌ವುಡ್‌ ಪ್ರಸ್ತುತ ದಿನದಲ್ಲಿ ತುಂಬಾನೆ ಆಕರ್ಷಿತವಾಗುತ್ತಿದೆ. ಹೊಸ ಕಲಾವಿದರು, ತಂತ್ರಜ್ಞರನ್ನು ತುಳು ಸಿನೆಮಾ ಇಂಡಸ್ಟ್ರಿ ತನ್ನತ್ತ ಬರಮಾಡಿಕೊಳ್ಳುತ್ತಿದೆ. ಕಲಾವಿದರಾಗಬೇಕೆಂಬ ತುಡಿತದಲ್ಲಿರುವ ಬಹಳಷ್ಟು ಕಲಾವಿದರಿಗೆ ಕೋಸ್ಟಲ್‌ವುಡ್‌ ವೇದಿಕೆ ಒದಗಿಸುತ್ತಿದೆ. ಇಂತಹ ಸಾಲಿನಲ್ಲಿ ಇದೀಗ ನಿತ್ಯಪ್ರಕಾಶ್‌ ಬಂಟ್ವಾಳ್‌ ಸೇರ್ಪಡೆಯಾಗಿದ್ದಾರೆ.

Advertisement

ಸೋಶಿಯಲ್‌ ಮೀಡಿಯಾ ಹಾಗೂ ಕಿರುತೆರೆಯ ಮೂಲಕ ವಿಭಿನ್ನ ಮ್ಯಾನರಿಸಂ ಮೂಲಕ ಗಮನಸೆಳೆದಿದ್ದ ನಿತ್ಯಪ್ರಕಾಶ್‌ ಇದೀಗ ಕೋಸ್ಟಲ್‌ವುಡ್‌ಗೆ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ಹರಿಕೃಷ್ಣ ಬಂಟ್ವಾಳ್‌ ಅವರ ಪುತ್ರ ನಿತ್ಯಪ್ರಕಾಶ್‌ ಸಿನೆಮಾ ಕುರಿತಂತೆ ಅನುಭವ ಹೊಂದಿದ್ದು, ಕಿರು ಚಿತ್ರಗಳ ಮೂಲಕ ಹಾಗೂ ವಿಡಿಯೋ ತುಣುಕುಗಳ ಮುಖೇನ ಸೋಶಿಯಲ್‌ ಮೀಡಿಯಾದಲ್ಲಿ ಗಮನಸೆಳೆದಿದ್ದರು. ಸದ್ಯ ನಿತ್ಯ ಅವರು ಹೊಸ ತುಳು ಸಿನೆಮಾದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ತುಳು ಸಿನೆಮಾ ನಿರ್ಮಾಪಕರ ಸಂಘದ ಅಧ್ಯಕ್ಷ; ಕೆಲವು ತುಳು ಸಿನೆಮಾ ನೀಡಿದ ರಾಜೇಶ್‌ ಬ್ರಹ್ಮಾವರ ನಿರ್ಮಾಣದಲ್ಲಿ ಸೆಟ್ಟೇರುತ್ತಿರುವ ಹೊಸ ತುಳು ಸಿನೆಮಾದಲ್ಲಿ ನಿತ್ಯಪ್ರಕಾಶ್‌ ಹೀರೋ. ಇತ್ತೀಚೆಗೆ ಮುಹೂರ್ತ ಕಂಡಿರುವ ಈ ಸಿನೆಮಾದ ಶೂಟಿಂಗ್‌ ಕೂಡ ಈಗಾಗಲೇ ಆರಂಭವಾಗಿದ್ದು, ಟೈಟಲ್‌ ಮಾತ್ರ ಇನ್ನೂ ಫೈನಲ್‌ ಮಾಡಿಲ್ಲ. ಹೊಸಬರನ್ನೇ ಮುಖ್ಯ ನೆಲೆಯಲ್ಲಿಟ್ಟು ಮಾಡಿಕೊಂಡ ಈ ಸಿನೆಮಾ ಸದ್ಯ ಮಂಗಳೂರು ವ್ಯಾಪ್ತಿಯಲ್ಲಿ ಚಿತ್ರೀಕರಣ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next