Advertisement

ಲಾಲು ಸಾಧನೆಯೇನು? ಅಕ್ರಮ ಆಸ್ತಿ ಬಿಟ್ಟರೆ ಮತ್ತೇನು ಮಾಡಿದ್ದಾರೆ? ನಿತೀಶ್‌ ಪ್ರಶ್ನೆ

12:35 AM Oct 25, 2020 | sudhir |

ಪಾಟ್ನಾ: “ನಿಮ್ಮ ಅಪ್ಪನನ್ನು ಕೇಳಿ – ಅವಕಾಶ ಸಿಕ್ಕಾಗ ಯಾವುದಾದರೂ ಶಾಲೆ, ಕಾಲೇಜುಗಳನ್ನು ತೆರೆದಿದ್ದಾರೆಯೋ ಅಥವಾ ಹಣ ಮಾಡುವುದರಲ್ಲೇ ಬ್ಯುಸಿಯಾಗಿದ್ದರೋ ಎಂದು?’

Advertisement

ಹೀಗೆಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ವಿರುದ್ಧ ನೇರ ವಾಗ್ಧಾಳಿ ನಡೆಸಿರುವುದು ಬಿಹಾರ ಸಿಎಂ ನಿತೀಶ್‌ ಕುಮಾರ್‌. ಚುನಾವಣೆಗೆ ಇನ್ನೇನು 4 ದಿನಗಳು ಇರುವಂತೆಯೇ ಟೇಘ್ರಾ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಾ, ರಾಜಕೀಯ ಪ್ರತಿಸ್ಪರ್ಧಿ ವಿರುದ್ಧ ಕಟು ಮಾತು ಗಳಿಂದಲೇ ದಾಳಿ ನಡೆಸಿ ರುವ ನಿತೀಶ್‌, “ರಾಜ್ಯದ ಅಧಿಕಾರದ ಗದ್ದುಗೆಯಲ್ಲಿ ಇತರರೂ ಇದ್ದರು. ಆದರೆ ಅವರೇನು ಮಾಡಿದರು? ಶಾಲೆ-ಕಾಲೇಜು ಕಟ್ಟಿದರಾ? ಆಡಳಿತ ನಡೆಸಿದರು, ಅಕ್ರಮ ಆಸ್ತಿ ಮಾಡಿಕೊಂಡರು, ಜೈಲಿಗೆ ಹೋದರು ಅಷ್ಟೆ’ ಎಂದರು.

ಇದೇ ವೇಳೆ, ಎಲ್‌ಜೆಪಿ ಸ್ಥಾಪಕ ರಾಮ್‌ವಿಲಾಸ್‌ ಪಾಸ್ವಾನ್‌ ಹುಟ್ಟೂರು ಅಲೌಲಿಯಲ್ಲಿ ಶನಿವಾರ ಬಿಹಾರ ಸಿಎಂ ನಿತೀಶ್‌ ಕುಮಾರ್‌ ಚುನಾವಣಾ ಪ್ರಚಾರ ನಡೆಸಿದ್ದಾರೆ. ಆದರೆ, ತಮ್ಮ ಭಾಷಣದಲ್ಲಿ ಎಲ್ಲೂ ಎಲ್‌ಜೆಪಿ ಅಥವಾ ಚಿರಾಗ್‌ ಪಾಸ್ವಾನ್‌ ಪರವಾಗಲೀ, ವಿರುದ್ಧವಾಗಲೀ ಪ್ರಸ್ತಾವ ಮಾಡಲಿಲ್ಲ.

10 ಲಕ್ಷ ಉದ್ಯೋಗ, ಸಾಲ ಮನ್ನಾ: ಆರ್‌ಜೆಡಿ ಶನಿವಾರ ಬಿಹಾರ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, 10 ಲಕ್ಷ ಉದ್ಯೋಗ ಸೃಷ್ಟಿ, ರೈತರ ಸಾಲ ಮನ್ನಾ, ಹೊಸ ಕೈಗಾರಿಕಾ ನೀತಿ ಸೇರಿದಂತೆ ವಿವಿಧ ಆಶ್ವಾಸನೆಗಳನ್ನು ನೀಡಿದೆ. ಅಧಿಕಾರಕ್ಕೆ ಬಂದರೆ ಕೃಷಿ, ಕೈಗಾರಿಕೆ ಮತ್ತು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗುವುದು ಎಂದು ಪಕ್ಷದ ನಾಯಕ ತೇಜಸ್ವಿ ಯಾದವ್‌ ಹೇಳಿದ್ದಾರೆ.

ಎನ್‌ಡಿಎಗೆ ಜಯ?
ಮುಂದಿನ ವಾರವೇ ಬಿಹಾರ ಚುನಾವಣೆಯ ಮೊದಲ ಹಂತ ಆರಂಭವಾಗಲಿದ್ದು, ಎಬಿಪಿ -ಸಿವೋಟರ್‌ ನಡೆಸಿರುವ ಚುನಾವಣಾಪೂರ್ವ ಸಮೀಕ್ಷೆಯೂ ಎನ್‌ಡಿಎಗೆ ಜಯ ಖಚಿತ ಎಂದು ಹೇಳಿದೆ.

Advertisement

ಫ‌ಡ್ನವೀಸ್‌ಗೆ ಸೋಂಕು
ಬಿಹಾರ ಬಿಜೆಪಿ ಉಸ್ತುವಾರಿ ದೇವೇಂದ್ರ ಫ‌ಡ್ನವೀಸ್‌ ಅವರಿಗೆ ಶನಿ ವಾರ ಕೊರೊನಾ ಸೋಂಕು ದೃಢಪಟ್ಟಿದೆ. ವಿಶೇಷವೆಂದರೆ, ಬಿಹಾರದಲ್ಲಿ ಬಿಜೆಪಿಯ ಒಟ್ಟು 7 ನಾಯ ಕರಿಗೆ ಪಾಸಿಟಿವ್‌ ಆದಂತಾಗಿದೆ. ಈಗಾಗಲೇ ಪಕ್ಷದ ನಾಯ ಕರಾದ ಸುಶೀಲ್‌ ಮೋದಿ, ಶಹನವಾಜ್‌ ಹುಸೇನ್‌, ರಾಜೀವ್‌ ಪ್ರತಾಪ್‌ ರೂಡಿ, ಮಂಗಲ್‌ ಪಾಂಡೆ, ಜೆಡಿಯು ನ‌ ವಿಜಯ್‌ ಕುಮಾರ್‌ ಮಾಂಝಿಗೆ ಸೋಂಕು ದೃಢಪಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next