Advertisement

ಕುತೂಹಲ ಮೂಡಿಸಿದ ನಿರ್ಮಲಾನಂದ ಶ್ರೀಗಳ ಪ್ರಧಾನಿ ಭೇಟಿ,ಶಾ ಸಾಥ್‌!

12:24 PM Oct 24, 2018 | |

ಹೊಸದಿಲ್ಲಿ: ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ಶ್ರೀಗಳು ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. 

Advertisement

ಪ್ರಧಾನಿ ನಿವಾಸಕ್ಕೆ  ಇತರ ಕೆಲ ಶ್ರೀಗಳೊಂದಿಗೆ ತೆರಳಿದ ನಿರ್ಮಲಾನಂದ ಶ್ರೀಗಳು ಕೆಲ ಹೊತ್ತು ಮಾತುಕತೆ ನಡೆಸಿದರು. ಈ ವೇಳೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಅವರು ಉಪಸ್ಥಿತರಿದ್ದರು. 

ಲೋಕಸಭಾ ಚುನಾವಣೆಗೆ ಕೆಲ ದಿನಗಳಿರುವ ವೇಳೆಯಲ್ಲಿ  ಒಕ್ಕಲಿಗ ಪ್ರಾಬಲ್ಯದ ಕ್ಷೇತ್ರಗಳನ್ನು ಗೆಲ್ಲಲು ಬಿಜೆಪಿ ಭಾರೀ ರಣತಂತ್ರಗಳನ್ನು ಹೂಡುತ್ತಿರುವ ವೇಳೆಯಲ್ಲಿ  ನಡೆದಿರುವ ಈ ಭೇಟಿ ಭಾರೀ ಕುತೂಹಲವನ್ನು ಮೂಡಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next