Advertisement

ನಿರ್ಭಯಾ ದೋಷಿಗಳ ಪತ್ರ

09:43 AM Nov 05, 2019 | Team Udayavani |

ಹೊಸದಿಲ್ಲಿ: ನಿರ್ಭಯಾ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಒಳಗಾಗಿರುವ ಅಪರಾಧಿಗಳಲ್ಲಿ ಮೂವರು, ಇತ್ತೀಚೆಗೆ ತಮಗೆ ಜಾರಿಗೊಳಿಸಲಾಗಿದ್ದ ನೋಟಿಸನ್ನು ಹಿಂಪಡೆಯುವಂತೆ ತಿಹಾರ್‌ ಜೈಲಿನ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

Advertisement

ಅ. 29ರಂದು ನಿರ್ಭಯಾ ಅಪರಾಧಿಗಳಿಗೆ ನೋಟಿಸ್‌ ಜಾರಿಗೊಳಿಸಿದ್ದ ಅಧಿಕಾರಿಗಳು, ‘ರಾಷ್ಟ್ರಪತಿಯಲ್ಲಿ ಕ್ಷಮೆ ಕೋರುವ ಅವಕಾಶವನ್ನು ಅಪರಾಧಿಗಳ ಗಮನಕ್ಕೆ ತಂದಿದ್ದರು. ಇದಕ್ಕೆ ಉತ್ತರಿಸಿರುವ ಅಪರಾಧಿಗಳು, ತಮ್ಮಲ್ಲಿ ಒಬ್ಬನಾದ ಅಕ್ಷಯ್‌ ಕುಮಾರ್‌ ಸಿಂಗ್‌ ಸಲ್ಲಿಸಿರುವ ಗಲ್ಲು ಆದೇಶ ಪುನರ್‌ ಪರಿಶೀಲನೆ ಅರ್ಜಿ ಇನ್ನೂ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿಯಿದೆ. ಹಾಗಾಗಿ, ರಾಷ್ಟ್ರಪತಿಯವರಲ್ಲಿ ಕ್ಷಮೆ ಕೋರುವ ಪ್ರಮೇಯ ಈಗಿಲ್ಲ ಎಂದು ತಮ್ಮ ವಕೀಲರ ಮೂಲಕ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next