Advertisement

ಸಾವಿನ ಕುಣಿಕೆಗೆ ಕೊರಳೊಡ್ಡುವ ಮುನ್ನ ಊಟ, ಸ್ನಾನ ನಿರಾಕರಿಸಿದ್ದ ನಿರ್ಭಯಾ ದೋಷಿಗಳು!

10:01 AM Mar 21, 2020 | Nagendra Trasi |

ನವದೆಹಲಿ: ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ದೋಷಿಗಳು ಗಲ್ಲುಶಿಕ್ಷೆ ಖಚಿತವಾಗಿದ್ದರಿಂದ ತಿಹಾರ್ ಜೈಲಿನಲ್ಲಿ ಕೊನೆಯ ಕೆಲವು ಗಂಟೆಗಳ ಕಾಲ ಪ್ರತ್ಯೇಕ ಸೆಲ್ ನಲ್ಲಿ ಇರಿಸಲಾಗಿತ್ತಂತೆ. ಅಲ್ಲದೇ ನಾಲ್ವರು ನಿದ್ದೆ ಇಲ್ಲದೆ ಕಾಲ ಕಳೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಅಕ್ಷಯ್ ಠಾಕೂರ್ (31ವರ್ಷ), ಪವನ್ ಗುಪ್ತಾ (25ವರ್ಷ), ವಿನಯ್ ಶರ್ಮಾ (26ವರ್ಷ) ಮತ್ತು ಮುಖೇಶ್ ಸಿಂಗ್ (32ವರ್ಷ) ಮರಣದಂಡನೆಗೆ ಕೊರಳೊಡ್ಡುವವರೆಗೂ ಕಾನೂನು ಹೋರಾಟ ನಡೆಸಿ ವಿಫಲರಾಗಿದ್ದರು. ಗಲ್ಲುಶಿಕ್ಷೆಗೆ ಎರಡು ಗಂಟೆ ಬಾಕಿ ಇರುವಾಗ ಸುಪ್ರೀಂಕೋರ್ಟ್ ಕದತಟ್ಟಿದ್ದು, ಅರ್ಜಿಯನ್ನು ವಜಾಗೊಳಿಸಿತ್ತು.

ಕೊನೆಯ ಇಚ್ಛೆ ಏನು?

ನಾಲ್ವರು ದೋಷಿಗಳು ಕೊನೆಯ ಯಾವ ಆಸೆಯನ್ನೂ ವ್ಯಕ್ತಪಡಿಸಿಲ್ಲವಾಗಿತ್ತು ಎಂದು ಜೈಲು ಅಧಿಕಾರಿ ತಿಳಿಸಿದ್ದಾರೆ. ಸುಪ್ರೀಂಕೋರ್ಟ್ ನಸುಕಿನಲ್ಲಿ ಅರ್ಜಿ ವಜಾಗೊಳಿಸಿದ ನಂತರ ತಮ್ಮ ಕೋರ್ಟ್ ಹಾದಿ ಮಾರ್ಗ ಮುಗಿದಿರುವುದು ಮನಗಂಡಿದ್ದರು. 3.30ಕ್ಕೆ ಅಪರಾಧಿಗಳು ಎದ್ದಿದ್ದರು. ವಧಾ ಸ್ಥಾನಕ್ಕೆ ಕರೆದೊಯ್ಯುವ ಮುನ್ನ ನೀಡಲಾಗಿದ್ದ ಉಪಹಾರ, ಕೊನೆಯ ಊಟವನ್ನು ನಿರಾಕರಿಸಿದ್ದರು. ಸ್ನಾನ ಮಾಡಲು ಕೂಡಾ ನಿರಾಕರಿಸಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿರುವುದಾಗಿ ವರದಿ ತಿಳಿಸಿದೆ.

ಕಳೆದ ರಾತ್ರಿಯಿಂದ ಇಡೀ ತಿಹಾರ್ ಜೈಲ್ ಅನ್ನು ಲಾಕ್ ಡೌನ್ ಮಾಡಲಾಗಿತ್ತು. ಶುಕ್ರವಾರ ಮುಂಜಾನೆ 5.30ಕ್ಕೆ ಗಲ್ಲಿಗೇರಿಸುವ ಸಂದರ್ಭದಲ್ಲಿ ಜೈಲು ಸೂಪರಿಟೆಂಡೆಂಟ್, ಡೆಪ್ಯುಟಿ ಸೂಪರಿಟೆಂಡೆಂಟ್, ರೆಸಿಡೆಂಟ್ ಮೆಡಿಕಲ್ ಆಫೀಸರ್, ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟ್ ಮತ್ತು ಇತರ ಜೈಲು ಅಧಿಕಾರಿಗಳು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next