Advertisement

ಇದಕ್ಕಿಂತ ಹೆಚ್ಚು ತುರ್ತು ಬೇರೆ ಇರಲಿಕ್ಕಿಲ್ಲ: ಸಿಜೆಐ ಬೋಬ್ಡೆ

09:56 AM Jan 29, 2020 | Hari Prasad |

ಹೊಸದಿಲ್ಲಿ: ‘ಒಬ್ಬ ವ್ಯಕ್ತಿಯನ್ನು ಸದ್ಯದಲ್ಲೇ ಗಲ್ಲಿಗೇರಿಸಲಾಗುತ್ತದೆ ಎಂದಿರುವಾಗ, ಅದಕ್ಕಿಂತ ಹೆಚ್ಚು ಅರ್ಜೆಂಟ್‌ ಬೇರೆ ಇರಲಿಕ್ಕಿಲ್ಲ.’ ಹೀಗೆಂದು ಹೇಳಿರುವುದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎಸ್‌.ಎ. ಬೋಬ್ಡೆ. ಕ್ಷಮಾದಾನ ಅರ್ಜಿ ತಿರಸ್ಕೃತಗೊಂಡಿರುವುದನ್ನು ಪ್ರಶ್ನಿಸಿ ನಿರ್ಭಯಾ ಅತ್ಯಾ ಚಾರಿ ಮುಕೇಶ್‌ ಸಿಂಗ್‌ ಸಲ್ಲಿಸಿರುವ ಅರ್ಜಿಯ ತ್ವರಿತ ವಿಚಾರಣೆಗೆ ವಕೀಲರು ಮನವಿ ಮಾಡಿದಾಗ ಸಿಜೆಐ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

Advertisement

ಒಬ್ಬನ ಸಾವು ಸಮೀಪಿಸುತ್ತಿದೆ ಎನ್ನುತ್ತಿರುವಾಗ ಅದಕ್ಕಿಂತ ತ್ವರಿತ ವಿಚಾರ ಬೇರೆ ಇರಲಿಕ್ಕಿಲ್ಲ. ಹಾಗಾಗಿ, ಮರಣದಂಡನೆ ಪ್ರಕರಣಕ್ಕೆ ಪ್ರಮುಖ ಆದ್ಯತೆ ನೀಡಲಾಗುವುದು ಎಂದು ಸಿಜೆಐ ಹೇಳಿದ್ದಾರೆ. ಜತೆಗೆ ಸುಪ್ರೀಂ ಕೋರ್ಟ್‌ ರಿಜಿಸ್ಟ್ರಿಗೆ ಮನವಿ ಸಲ್ಲಿಸುವಂತೆ ಸೂಚಿಸಿದ್ದಾರೆ.

ಈಗಾಗಲೇ ನಾಲ್ವರು ಅತ್ಯಾಚಾರಿಗಳ ಮರಣದಂಡನೆಗೆ ಡೆತ್‌ ವಾರಂಟ್‌ ಹೊರಡಿಸಲಾಗಿದ್ದು, ಅದರ ಪ್ರಕಾರ, ಫೆ.1ರ ಬೆಳಗ್ಗೆ 6 ಗಂಟೆಗೆ ನೇಣು ಗಂಬಕ್ಕೇರಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next