Advertisement

ವಜ್ರೋದ್ಯಮಿ ನೀರವ್‌ ಮೋದಿ ಭಾರತ ಹಸ್ತಾಂತರ ಇನ್ನಷ್ಟು ದೂರ

08:14 PM Aug 09, 2021 | Team Udayavani |

ಬ್ರಿಟನ್‌: ಭಾರತದಿಂದ ಪರಾರಿಯಾಗಿರುವ ವಜ್ರೋದ್ಯಮಿ ನೀರವ್‌ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸುವ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಬ್ರಿಟನ್‌ ಹೈಕೋರ್ಟ್‌ ನೀರವ್‌ ಪರ ವಕೀಲರಿಗೆ ಅನುಮತಿ ನೀಡಿದೆ.

Advertisement

ನೀರವ್‌ ಖನ್ನತೆಯಿಂದ ಬಳಲುತ್ತಿದ್ದು, ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆ ಇದೆ ಎನ್ನುವ ಕಾರಣಕ್ಕೆ ಈ ಅನುಮತಿ ನೀಡಲಾಗಿದೆ. ಅವರನ್ನು ಮುಂಬೈನ ಆರ್ಥರ್‌ ರಸ್ತೆಯ ಜೈಲಿನಲ್ಲಿ ಇರಿಸಲಾಗುವುದು. ಅಲ್ಲಿ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆಯಿದೆ ಎಂದು ನೀರವ್‌ ವಕೀಲರು ನ್ಯಾಯಾಲಯದಲ್ಲಿ ವಾದಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಅವರಿಗೆ ಮೇಲ್ಮನವಿ ಸಲ್ಲಿಸಲು ನ್ಯಾಯಮೂರ್ತಿ ಮಾರ್ಟಿನ್‌ ಚೇಂಬರ್ಲೆನ್ ಅನುಮತಿ ನೀಡಿದ್ದಾರೆ.

ಈ ವರ್ಷ ಫೆಬ್ರವರಿಯಲ್ಲಿ ನೀರವ್‌ ಅವರನ್ನು ಭಾರತಕ್ಕೆ ಹಸ್ತಾಂತರಿಸುವಂತೆ ವೆಸ್ಟ್‌ ಮಿನಿಸ್ಟರ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ತೀರ್ಪು ನೀಡಿದ್ದು, ಗೃಹ ಕಾರ್ಯದರ್ಶಿಯಿಂದ ಅನುಮೋದನೆಯೂ ಸಿಕ್ಕಿತ್ತು.

Advertisement

Udayavani is now on Telegram. Click here to join our channel and stay updated with the latest news.

Next