Advertisement

Hubballi: ನಮಗೆ ಆದ ಅನ್ಯಾಯ ಬೇರೆ‌ ಯಾರಿಗೂ ಆಗಬಾರದು… ನಿರಂಜನ ಹಿರೇಮಠ ಹೇಳಿಕೆ

12:57 PM May 28, 2024 | Team Udayavani |

ಹುಬ್ಬಳ್ಳಿ: ನೇಹಾ ಹಿರೇಮಠ ಕೊಲೆ ಆಗಿದ್ದು ಇದೊಂದು ಪೂರ್ವ ನಿಯೋಜಿತ ಕೃತ್ಯ ಎಂದು ಸಿಐಡಿ ಡಿಜಿಪಿ ಅವರಿಗೆ ಮಾಹಿತಿ ಕೊಟ್ಟಿದ್ದೇನೆ ಎಂದು ನೇಹಾ ತಂದೆ ಹಾಗೂ ಹು-ಧಾ. ಮಹಾನಗರ ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಹೇಳಿದರು.

Advertisement

ಸಿಐಡಿ ಡಿಜಿಪಿ ಎಂ.ಎ. ಸಲೀಂ ಅವರು ಅವರ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮಗಳ ಕೊಲೆಯಲ್ಲಿಯೇ ಇದು ಅಂತ್ಯ ಆಗಬೇಕು. ನಮಗೆ ಆದ ಅನ್ಯಾಯ ಬೇರೆ‌ ಯಾರಿಗೂ ಆಗಬಾರದು ಎಂದರು.

ನನ್ನ ಮಗಳ ಕೊಲೆಯಾಗಿ ಒಂದೂವರೆ ತಿಂಗಳಾಯಿತು. ಸಿಐಡಿ ತಂಡ ಹುಬ್ಬಳ್ಳಿಯಲ್ಲಿಯೇ ಬಿಡು ಬಿಟ್ಟಿದ್ದು, ಎಲ್ಲಾ ಆಯಾಮಗಳ ಮೇಲೆ ತನಿಖೆ ನಡೆಸುತ್ತಿದ್ದಾರೆ ಎಂಬ ನಂಬಿಕೆ ಇದೆ.‌ ಆದಷ್ಟು ಬೇಗ ತನಿಖಾ ವರದಿ ಕೊಡಬೇಕು. ತನಿಖಾಧಿಕಾರಿಗಳು ಚಾರ್ಜ್‌ಶಿಟ್ ಸಲ್ಲಿಸಲಿ ನೋಡೋಣ. ಅದು ತನಿಖೆ ಯಾವ ರೀತಿ ನಡೆದಿದೆ ಎಂಬ ಬಗ್ಗೆ ಆಗ ಮಾತನಾಡುವೆ. ಆದರೆ ಈಗಲೇ ಏನು ಮಾತನಾಡಲು ಆಗಲ್ಲ ಎಂದರು‌.

ಅಂಜಲಿ ಅಂಬೀಗೇರ ಕೊಲೆ ಪ್ರಕರಣದ ತನಿಖೆ ಸಹ ನಡೆಯುತ್ತಿದೆ. ಅವಳ ಸಾವಿಗೂ ಸಹ ನ್ಯಾಯ ಸಿಗಬೇಕು ಎಂದರು.

ಇದನ್ನೂ ಓದಿ: Shivamogga: ವಾಲ್ಮೀಕಿ ನಿಗಮದ ಮಂತ್ರಿಯನ್ನು ಕೂಡಲೇ ವಜಾಗೊಳಿಸಿ; ಕೆ.ಬಿ ಪ್ರಸನ್ನ ಆಗ್ರಹ

Advertisement
Advertisement

Udayavani is now on Telegram. Click here to join our channel and stay updated with the latest news.

Next