Advertisement

Hubballi; ಆಟೋರಿಕ್ಷಾ ಚಾಲಕರ, ಮಾಲಕರ ಸಂಘದ ಅಧ್ಯಕ್ಷ ನ ಪುತ್ರನ ಹತ್ಯೆ

09:55 PM Jun 22, 2024 | Team Udayavani |

ಹುಬ್ಬಳ್ಳಿ: ಉತ್ತರ ಕರ್ನಾಟಕ ಆಟೋರಿಕ್ಷಾ ಚಾಲಕರ, ಮಾಲಕರ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ ಮಗ ಆಕಾಶ ಮಠಪತಿ (25) ಎಂಬಾತನನ್ನು ಆತನ ಸ್ನೇಹಿತರೇ ಇಲ್ಲಿನ ಆರ್.ಎಂ. ಲೋಹಿಯಾ ನಗರದ ಶಾಲೆಯೊಂದರ ಹಿಂಭಾಗದ ಬಯಲು ಜಾಗದಲ್ಲಿ ಕೊಲೆ ಮಾಡಿದ್ದಾರೆಂದು ಹೇಳಲಾಗುತ್ತಿದೆ.

Advertisement

ಮಧ್ಯಾಹ್ನ ಲೋಹಿಯಾ ನಗರ ಹಿಂಭಾಗದ ಮಿಡ್ ಮ್ಯಾಕ್ ಲೇಔಟ್ ನಲ್ಲಿ ಸ್ನೇಹಿತರು ಕೂಡಿಕೊಂಡು ಆಟವಾಡುತ್ತಿದ್ದ ವೇಳೆ ಕ್ಷುಲ್ಲಕ ಕಾರಣಕ್ಕೆ ಜಗಳವಾದಾಗ ಅದು ವಿಕೋಪಕ್ಕೆ ಹೋಗಿದೆ. ಇದೇ ವೇಳೆ ಹಲ್ಲೆ ನಡೆದಿದ್ದು, ಆಕಾಶ ಮಠಪತಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾನೆ.

ಮಠಪತಿ ಇಲೆಕ್ಟ್ರೀಷಿಯನ್ ಕೆಲಸ ಮಾಡುತ್ತಿದ್ದ. ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆ ನಡೆದ ಎಂದು ಸಂಶಯ ವ್ಯಕ್ತವಾಗಿದೆ. ಕೊಲೆ ನಡೆದ ಸ್ಥಳಕ್ಕೆ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ, ಡಿಸಿಪಿ ರವೀಶ, ಎಸಿಪಿ ಉಮೇಶ ಹಿರೇಮಠ ಸೇರಿದಂತೆ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next