Advertisement

ಬೆಟ್ಟದಿಂದ ಉರುಳಿದ ಬಂಡೆಗಳು; 9 ಜನರ ಸಾವು; ಮುರಿದು ಬಿದ್ದ ಬ್ರಿಡ್ಜ್

05:16 PM Jul 25, 2021 | Team Udayavani |

ಹಿಮಾಚಲ ಪ್ರದೇಶ : ಭೂ ಕುಸಿತದ ಪರಿಣಾಮ ಒಂಭತ್ತು ಜನರು ಸಾವನ್ನಪ್ಪಿದ್ದು ನಾಲ್ವರು ಗಾಯಗೊಂಡ ದುರಂತ ಘಟನೆ ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿ ಭಾನುವಾರ (ಜು.25) ನಡೆದಿದೆ.

Advertisement

ಸಾಂಗ್ಲಾ-ಚಿತ್ತಾಕೂಲ್ ಸಮೀಪ ಗುಡ್ಡ ಕುಸಿದ ಪರಿಣಾಮ ಈ ಅವಘಡ ನಡೆದಿದೆ. ಚಿತ್ತಾಕುಲ ದಿಂದ ಸಾಂಗ್ಲಾಗೆ ಪ್ರಯಾಣಿಸುತ್ತಿದ್ದ ತೆಂಪೊ ಮೇಲೆ ಬಂಡೆಗಳು ಉರುಳಿ ಬಿದ್ದಿದ್ದು 9 ಜನರ ಮಾರಣಹೋಮಕ್ಕೆ ಕಾರಣವಾಗಿದೆ.

ಇನ್ನು ಬೆಟ್ಟದ ಮೇಲಿನ ಬೃಹದಾಕಾರಣ ಬಂಡೆಗಳು ಕುಸಿದ ಪರಿಣಾಮ ಬ್ರಿಡ್ಜ್ ಒಂದು ಮುರಿದು ಬಿದ್ದಿದೆ. ಸಮೀಪದ ಮನೆಗಳಿಗೂ ಹಾನಿಯುಂಟಾಗಿದೆ. ಈ ದುರ್ಘಟನೆ ಭಯಾನಕ ಕ್ಷಣಗಳನ್ನು ವ್ಯಕ್ತಿಯೊಬ್ಬರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಸದ್ಯ ವೈರಲ್ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next