Advertisement

ಲಾಕ್ ಡೌನ್ ನಡುವೆ ನಿಖಿಲ್- ರೇವತಿ ಕಲ್ಯಾಣ ಮಹೋತ್ಸವ

09:23 AM Apr 18, 2020 | keerthan |

ರಾಮನಗರ: ರಾಮನಗರ ತಾಲೂಕು ಬಿಡದಿ ಹೋಬಳಿ ಕೇತಗನಹಳ್ಳಿಯಲ್ಲಿರುವ ತಮ್ಮ ತೋಟದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಪುತ್ರ ನಿಖಿಲ್ ಕುಮಾರಸ್ವಾಮಿ – ರೇವತಿ ಮದುವೆ ನಡೆಯಿತು.

Advertisement

ಇಂದು ಬೆಳಿಗ್ಗೆ 9 ಗಂಟೆಯಿಂದ 9.45ರೊಳಗೆ ಶುಭ ಲಗ್ನದಲ್ಲಿ ವಿವಾಹ ಕಾರ್ಯ ನೆರೆವೇರಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ದಂಪತಿ ನೂತನ ವಧು ವರರಿಗೆ ಶುಭ ಕೋರಿದರು.

ಲಾಕ್ ಡೌನ್ ಕಾರಣದಿಂದ ವಿವಾಹ ಕಾರ್ಯ ಸರಳವಾಗಿ ನಡೆದರೂ ಶಾಸ್ತ್ರೋಕ್ತವಾಗಿ ನಡೆಯಿತು. ಕೆಲವೇ ಕೆಲವು ಆಪ್ತರಿಗೆ ಮಾತ್ರ ಅವಕಾಶ ನೀಡಲಾಗಿದೆ.

ಮಾಧ್ಯಮ ಪ್ರತಿನಿಧಿಗಳು ಸೇರಿದಂತೆ ಜೆಡಿಎಸ್ ಮುಖಂಡರು, ಜನಪ್ರತಿನಿಧಿಗಳಿಗೂ ಪ್ರವೇಶ ನಿರಾಕರಿಸಲಾಗಿತ್ತು. ಎರಡೂ ಕುಟುಂಬಗಳ ಸೀಮಿತ ಮಂದಿ ಮಾತ್ರ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದರು.

ರಾಮನಗರ- ಮಂಡ್ಯ, ರಾಮನಗರ- ಬೆಂಗಳೂರು ಗಡಿಗಳಲ್ಲಿ ವಾಹನ ಸಂಚಾರದ ಮೇಲೆ ಪೊಲೀಸರು ಕಟ್ಟೆಚ್ಚರವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next