Advertisement

ಮಂಡ್ಯ ಬಿಟ್ಟು, ಮೈಸೂರಿಗೆ ಹೊರಟ ನಿಖಿಲ್‌

01:44 AM Mar 03, 2019 | Team Udayavani |

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಲು ಅತೀವ ಆಸಕ್ತಿ ಹೊಂದಿದ್ದ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್‌, ಇದೀಗ ಮೈಸೂರು ಕ್ಷೇತ್ರದಿಂದ ಅಖಾಡಕ್ಕಿಳಿಯಲು ಆಸಕ್ತಿ ತೋರಿದ್ದಾರೆ. ಜಿಲ್ಲಾ ರಾಜಕಾರಣಕ್ಕೆ ಸುಮಲತಾ ಆಗಮನ ದೇವೇಗೌಡರ ಕುಟುಂಬಕ್ಕೆದೊಡ್ಡ ತಲೆನೋವಾಗಿ ಪರಿಣಮಿಸಿದೆ.

Advertisement

ಸುಮಲತಾ ರನ್ನು ಚುನಾವಣಾಸ್ಪರ್ಧೆಯಿಂದ ಹಿಂದಕ್ಕೆ ಸರಿಸುವ ಗೌಡರ ಯಾವುದೇ ಪ್ರಯತ್ನಗಳು ಫ‌ಲ ನೀಡಿಲ್ಲ. ಕಾಂಗ್ರೆಸ್‌ಗೆ ನಿಷ್ಠೆ ವ್ಯಕ್ತಪಡಿಸುತ್ತಲೇ ಟಿಕೆಟ್‌ಗೆ ಬೇಡಿಕೆ ಇಟ್ಟಿರುವ ಸುಮಲತಾ, ಪಕ್ಷದ ನಿರ್ಧಾರ ಬೇರೆಯಾದರೆ ಅಭಿಮಾನಿಗಳ ಅಣತಿಯಂತೆ ನಡೆಯಲು ನಿರ್ಧರಿಸಿರುವುದು ಜೆಡಿಎಸ್‌ ಜೊತೆ ಮೈತ್ರಿಗೆ ಆಸಕ್ತಿ ತೋರುತ್ತಿರುವ ಕಾಂಗ್ರೆಸ್‌ ನಾಯಕರಿಗೂ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಇದರಿಂದಾಗಿ ಜೆಡಿಎಸ್‌ ಭದ್ರಕೋಟೆ, ಮಂಡ್ಯ ಕ್ಷೇತ್ರದೊಳಗೆ ಮುಖ್ಯಮಂತ್ರಿ ಮಗನಿಗೆ ಸೋಲಿನ ಭಯ ಕಾಡುತ್ತಿದ್ದು, ಇದು ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಹೀಗಾಗಿ, ಮಂಡ್ಯದಿಂದ ನಿಖೀಲ್‌ ಅವರನ್ನು ಕಣಕ್ಕಿಳಿಸದೆ, ಮೈಸೂರಿನಲ್ಲಿ ನೆಲೆ ಕಲ್ಪಿಸುವುದಕ್ಕೆ ಹೊರಟಿದ್ದಾರೆ ಎಂದು ತಿಳಿದು ಬಂದಿದೆ.

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸುಮಲತಾ ಅಂಬರೀಶ್‌ ಅವರು ಸ್ಪರ್ಧೆ ಮಾಡುವುದ ರಿಂದ ಜೆಡಿಎಸ್‌ಗೆ ಯಾವುದೇ ಭಯವಿಲ್ಲ. ಮಂಡ್ಯದಲ್ಲಿ ಎಲ್ಲರೂ ಜೆಡಿಎಸ್‌ ಶಾಸಕರಿದ್ದಾರೆ. ಹೀಗಿರುವಾಗ ಸುಮಲತಾ ಸ್ಪರ್ಧಿಸಿದರೆ ನಮಗೇಕೆ ಭಯ. ಇನ್ನು, ನಿಖೀಲ್‌ ಕುಮಾರಸ್ವಾಮಿಯವರು ಮೈಸೂರಿನಲ್ಲಿ ಸ್ಪರ್ಧಿಸುವ ಬಗ್ಗೆ ಹೇಳಿಲ್ಲ. ಸಚಿವ ಜಿ.ಟಿ.ದೇವೇಗೌಡರು ತಮ್ಮ ಅಭಿಪ್ರಾಯವನ್ನಷ್ಟೇ
ವ್ಯಕ್ತಪಡಿಸಿದ್ದಾರೆ.
● ಎಚ್‌.ವಿಶ್ವನಾಥ್‌, ಜೆಡಿಎಸ್‌ ರಾಜ್ಯಾಧ್ಯಕ್ಷ.

Advertisement

Udayavani is now on Telegram. Click here to join our channel and stay updated with the latest news.

Next