Advertisement

JDS: ಮಂಡ್ಯ ಜನರ ಒತ್ತಾಸೆಗೆ ಎಚ್ಡಿಕೆ ಕಣಕ್ಕೆ: ನಿಖಿಲ್‌

10:46 PM Mar 30, 2024 | Team Udayavani |

ನಾಗಮಂಗಲ: ಜಿಲ್ಲೆಯ ಜನತೆಯ ಒತ್ತಾಸೆ ಹಾಗೂ ರಾಷ್ಟ್ರಮಟ್ಟದ ಬಿಜೆಪಿ ವರಿಷ್ಠರ ಸಲಹೆ ಮೇರೆಗೆ ಎಚ್‌.ಡಿ.ಕುಮಾರಸ್ವಾಮಿ ಅವರು ಮಂಡ್ಯ ಲೋಕಸಭೆ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆಂದು ರಾಜ್ಯ ಯುವ ಜನತಾದಳದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಹೇಳಿದರು.

Advertisement

ಶನಿವಾರ ಆಯೋಜಿಸಿದ್ದ ಜೆಡಿಎಸ್‌ ಮತ್ತು ಬಿಜೆಪಿ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ತಂದೆಯವರ ಆರೋಗ್ಯದ ಬಗ್ಗೆ ಕೆಲವರು ಏನೇನೋ ಮಾತನಾಡುತ್ತಾರೆ. ಇಂದು ವೈದ್ಯಕೀಯ ಕ್ಷೇತ್ರ ಸಾಕಷ್ಟು ಮುಂದುವರಿದಿದೆ. ಈ ಬಾರಿ ಅಪರೇಷನ್‌ ಆದಾಗ ತೊಡೆ ಭಾಗದಿಂದ ಆಂಜೀಯೋಗ್ರಾಂ ಮಾಡುವ ರೀತಿ ಸೂಕ್ಷ್ಮವಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಆದರೆ ಆ ಬಗ್ಗೆ ನೀವು ಲಘುವಾಗಿ ಮಾತನಾಡುತ್ತೀರಿ. ನೀವು ಬೆಳೆದ ಮನೆ ಬಗ್ಗೆ ಕೀಳುಮಟ್ಟದಿಂದ ಮಾತನಾಡುತ್ತೀರಿ ಎಂದು ಶಾಸಕ ಬಾಬು ಬಂಡಿಸಿದ್ದೇಗೌಡರ ಮಾತಿಗೆ ಪ್ರತಿಕ್ರಿಯೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next