Advertisement

LS polls: ಚುನಾವಣೆಯಲ್ಲಿ ಷಡ್ಯಂತ್ರಕ್ಕೆ ಬಲಿಯಾದೆ; ನಿಖಿಲ್‌ ಕಣ್ಣೀರು

09:56 PM Apr 04, 2024 | Team Udayavani |

ರಾಮನಗರ: ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಡಾ| ಸಿ.ಎನ್‌.ಮಂಜುನಾಥ್‌  ನಾಮ ಪತ್ರ ಸಲ್ಲಿಕೆ ಬಳಿಕ ನಡೆದ ಬೃಹತ್‌ ಸಮಾವೇಶದಲ್ಲಿ ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಕಣ್ಣೀರಿಟ್ಟ ಪ್ರಸಂಗ ನಡೆಯಿತು.

Advertisement

ಸಮಾವೇಶದಲ್ಲಿ ಮಾತನಾಡುವ ವೇಳೆ, ಕಳೆದ ಚುನಾವಣೆಯಲ್ಲಿ ನಾನು ಷಡ್ಯಂತ್ರಕ್ಕೆ ಬಲಿಯಾದೆ. ರಾತೋರಾತ್ರಿ 5 ಸಾವಿರ ರೂ. ಕೂಪನ್‌ ಹಂಚಿ ಜನರಿಗೆ ಆಸೆ ಹುಟ್ಟಿಸಿ ಗೆಲುವು ಸಾಧಿಸಿದರು. ಆದರೂ ರಾಮನಗರದ ಪ್ರಜ್ಞಾವಂತ ಮತದಾರರು ನನಗೆ 76 ಸಾವಿರ ಮತಗಳನ್ನು ನೀಡಿದರು ಎಂದು ಕಣ್ಣೀರಿಟ್ಟರು.

ಡಾ| ಸಿ.ಎನ್‌.ಮಂಜುನಾಥ್‌ ಅವರನ್ನು  ರಾಜಕೀಯ ಹುಡುಕಿಕೊಂಡು ಬಂದಿದೆ. ನನಗಾದ ಮೋಸ ಅವರಿಗೆ ಆಗುವುದು ಬೇಡ. ಈ ಕ್ಷೇತ್ರದಲ್ಲಿ ಕೆಲವರು ಕುಕ್ಕರ್‌, ಸೀರೆ ಹಂಚುವ ಮೂಲಕ ಮತದಾರರ ದಾರಿ ತಪ್ಪಿಸುತ್ತಿದ್ದಾರೆ. ಹೀಗಾಗಿ ನಮ್ಮ ಕಾರ್ಯಕರ್ತರು ಚುನಾವಣ ಆಯೋಗದಂತೆ ಕೆಲಸ ಮಾಡಬೇಕಿದೆ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next