Advertisement

ಹೈಪೋಕ್ಲೋರೈಡ್‌ ದ್ರಾವಣ ಸಿಂಪಡಣೆ

05:30 PM Apr 17, 2020 | Naveen |

ನಿಡಗುಂದಿ: ಪಟ್ಟಣ ಪಂಚಾಯಿತಿ ವತಿಯಿಂದ ಬುಧವಾರ ಅಗ್ನಿಶಾಮಕ ದಳದ ತಂಡದ ನೆರವಿನಿಂದ ಪಟ್ಟಣದ ತುಂಬೆಲ್ಲ ಹೈಪೋಕ್ಲೋರೈಡ್‌ ದ್ರಾವಣ ಸಿಂಪಡಣೆ ಮಾಡಲಾಯಿತು.

Advertisement

ಅಗ್ನಿಶಾಮಕ ದಳದ ವಾಹನದ ನೆರವಿನಿಂದ ಪಟ್ಟಣದ ತುಂಬೆಲ್ಲ ಸಿಂಪಡಣೆ ಮಾಡಲಾಯಿತು. ಬ್ಯಾಕ್ಟಿರಿಯಾ, ವೈರಸ್‌ ಸೇರಿದಂತೆ ರೋಗ ಹರಡುವ ರೋಗಾಣುಗಳ ಸ್ವಲ್ಪ ಮಟ್ಟಿಗೆ ನಾಶಹೊಂದಲಿವೆ ಎಂದು ಪಟ್ಟಣದ ವೈದ್ಯಾಧಿಕಾರಿ ಡಾ| ಪ್ರಕಾಶ ಗೋಡ್ಕಿಂಡಿ ತಿಳಿಸಿದರು.

ತಹಶೀಲ್ದಾರ್‌ ಶಿವಲಿಂಗ ಪ್ರಭು ವಾಲಿ, ಪಟ್ಟಣ ಪಂಚಾಯಿತಿ ಮುಖ್ಯಾಧಿ ಕಾರಿ ಡಿ.ಎನ್‌. ತಹಶೀಲ್ದಾರ್‌, ಬಸವನಬಾಗೇವಾಡಿ ಅಗ್ನಿಶಾಮಕ ದಳದ ಸಿಬ್ಬಂದಿ ಇದ್ದರು. ಪೊಲೀಸ್‌ ಇಲಾಖೆ ಸಿಬ್ಬಂದಿಗಳು ಹಾಗೂ ಪಟ್ಟಣದ ಪೌರ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಜತೆಗೆ ಸ್ಕ್ರಿನಿಂಗ್‌ ಪರೀಕ್ಷೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next