Advertisement

ದೇಣಿಗೆ ಸಂಗ್ರಹಿಸಿ ಉಗ್ರರಿಗೆ ಕೊಡುತ್ತಿದ್ದ ಜೆಇಐ ಸಂಘಟನೆ!

11:32 PM Aug 08, 2021 | Team Udayavani |

ಶ್ರೀನಗರ: ನಿಷೇಧಿತ ಜಮಾತ್‌ ಎ ಇಸ್ಲಾಮಿ (ಜೆಇಐ) ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಅನೇಕರ ಮನೆ ಮತ್ತು ಕಚೇರಿಗಳ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ರವಿವಾರ ದಾಳಿ ನಡೆಸಿದೆ.

Advertisement

ಈ ಸಂಘಟನೆಯು ಅಭಿವೃದ್ಧಿ ಕಾರ್ಯದ ಹೆಸರಿನಲ್ಲಿ ದೇಣಿಗೆ ಸಂಗ್ರಹಿಸಿ ಉಗ್ರ ಸಂಘಟನೆಗಳಿಗೆ ನೀಡುತ್ತಿತ್ತು ಎನ್ನುವ ಆಘಾತಕಾರಿ ವಿಚಾರ ದಾಳಿಯಿಂದಾಗಿ ಬೆಳಕಿಗೆ ಬಂದಿದೆ.

ಜಮ್ಮು ಮತ್ತು ಕಾಶ್ಮೀರದ 14 ಜಿಲ್ಲೆಗಳ ಒಟ್ಟು 56 ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ. ಜೆಇಐ ಪ್ರಾದೇಶಿಕವಾಗಿ ಹಾಗೂ ವಿದೇಶಗಳಿಂದ ದೇಣಿಗೆ ಪಡೆಯುತ್ತಿತ್ತು. ಆ ಹಣವನ್ನು ಹಿಜ್ಬುಲ್‌ ಮುಜಾಹಿದೀನ್‌ ಮತ್ತು ಲಷ್ಕರ್‌ ಎ  ತಯ್ಯಬಾ ಉಗ್ರ ಸಂಘಟನೆಗಳಿಗೆ ನೀಡುತ್ತಿತ್ತು. ಜಮ್ಮು ಮತ್ತು ಕಾಶ್ಮೀರದಲ್ಲಿ ಯುವಕರ ಮನಸ್ಸನ್ನು ಬದಲಿಸಿ, ಉಗ್ರ ಸಂಘಟನೆಗೆ ಸೇರಿಸುವ ಕೆಲಸದಲ್ಲೂ ಇದರ ಪಾಲಿದೆ ಎಂದು ಎನ್‌ಐಎ ಹೇಳಿದೆ.

ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದೆ ಎನ್ನುವ ಕಾರಣಕ್ಕೆ ಜೆಇಐ ಅನ್ನು 2019ರ ಫೆಬ್ರವರಿಯಲ್ಲಿ ಐದು ವರ್ಷಗಳ ಕಾಲ ನಿರ್ಬಂಧಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next