Advertisement

ತಮಿಳುನಾಡಿನ 10 ಸ್ಥಳಗಳಲ್ಲಿ ಎನ್‌ಐಎ ಶೋಧ

01:43 AM May 21, 2019 | Team Udayavani |

ಚೆನ್ನೈ/ಲಂಡನ್‌: ಕೆಲವು ಯುವಕರು ಉಗ್ರ ಸಂಘಟನೆ ಕಟ್ಟಲು ಹೊಂಚು ಹಾಕುತ್ತಿದ್ದಾರೆ ಎಂಬ ಸುಳಿವಿನ ಮೇರೆಗೆ ತಮಿಳುನಾಡಿನ 10 ಪ್ರದೇಶ ಗಳಲ್ಲಿ ಸೋಮವಾರ ರಾಷ್ಟ್ರೀಯ ತನಿಖಾ ಸಂಸ್ಥೆ ಶೋಧ ಕಾರ್ಯ ನಡೆಸಿದೆ.

Advertisement

ಮುತ್ತುಪೇಟೆ, ಕೀಲಕರೈ, ದೇವಿಪಟ್ಟಿಣಂ, ಲಾಲ್‌ಪೇಟೆ ಮತ್ತು ಸೇಲಂನಲ್ಲಿ ಶೋಧ ಕಾರ್ಯ ನಡೆಸಲಾ ಗಿದೆ. ಈ ವೇಳೆ 3 ಲ್ಯಾಪ್‌ಟಾಪ್‌, 3 ಹಾರ್ಡ್‌ ಡಿಸ್ಕ್, 16 ಮೊಬೈಲ್‌ ಫೋನ್‌ಗಳು, 8 ಸಿಮ್‌ಕಾರ್ಡ್‌, 2 ಪೆನ್‌ಡ್ರೈವ್‌ಗಳು, 5 ಮೆಮೊರಿ ಕಾರ್ಡ್‌, 1 ಕಾರ್ಡ್‌ ರೀಡರ್‌, 2 ಚಾಕುಗಳನ್ನು ವಶಪಡಿಸಿ ಕೊಳ್ಳಲಾಗಿದೆ.

ತಮಿಳುನಾಡಿನ 10 ಯುವಕರು ವಾಟ್ಸಪ್‌ನಲ್ಲಿ ಗ್ರೂಪ್‌ ಮಾಡಿಕೊಂಡಿದ್ದರು.
2018ರಿಂದಲೇ ಇವರು ತಮ್ಮ ಗುಂಪಿಗೆ ಶಸ್ತ್ರಾಸ್ತ್ರ ಖರೀದಿ, ಹಣ ಹೊಂದಿಸುವುದು, ದಾಳಿ ಸಂಚು ರೂಪಿಸುತ್ತಿದ್ದರು.

ಮೂಲಗಳ ಪ್ರಕಾರ ಈ ಗುಂಪಿನ 9 ಜನರನ್ನು ಬಂಧಿಸಲಾಗಿದ್ದು, ಒಬ್ಬ ವ್ಯಕ್ತಿ ಇನ್ನೂ ತಲೆ ತಪ್ಪಿಸಿಕೊಂಡಿದ್ದಾನೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next