Advertisement

NIA ದಾಳಿ; ತಮಿಳುನಾಡಿನಲ್ಲಿ ಉಗ್ರ ಸಂಘಟನೆ ಸೇರಲು ಕುಮ್ಮಕ್ಕು: ಇಬ್ಬರ ಸೆರೆ

01:23 AM Jul 01, 2024 | Team Udayavani |

ಹೊಸದಿಲ್ಲಿ: ತಮಿಳುನಾಡಿನಲ್ಲಿ ಯುವಕ ರನ್ನು ಉಗ್ರ ಸಂಘಟನೆಗೆ ಸೇರುವಂತೆ ಕುಮ್ಮಕ್ಕು ನೀಡುವ ಆರೋಪಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಇಬ್ಬರನ್ನು ಬಂಧಿಸಿದೆ. ಅವರು ಹಿಜ್‌º-ಉತ್‌- ತಾಹಿರ್‌ ಎಂಬ ಮೂಲಭೂತ ಇಸ್ಲಾಮಿಕ್‌ ಸಂಘಟನೆ ಜತೆಗೆ ನಿಕಟ ಸಂಪರ್ಕ ಹೊಂದಿದ್ದರು ಎಂದು ಆರೋಪಿಸಲಾಗಿದೆ.

Advertisement

ಇದರ ಜತೆಗೆ ಎನ್‌ಐಎ ತಮಿಳುನಾಡಿನ 5 ಜಿಲ್ಲೆಗಳ 10 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆಯನ್ನೂ ನಡೆಸಿದೆ. ಈ ಮೂಲಕ ಉಗ್ರ ಸಂಘಟನೆಗಳಿಗೆ ಯುವಕರನ್ನು ಸೇರಿಸುವ ಜಾಲದ ಬಗ್ಗೆ ಬೃಹತ್‌ ತನಿಖೆಯನ್ನೂ ಕೈಗೊಂಡಿದೆ. ತನಿಖೆ ವೇಳೆ ಬಂಧಿತರು ಪ್ರಚೋದನ ಕಾರಿ ವಿಚಾರಧಾರೆಗಳ ಬಗ್ಗೆ ಆನ್‌ಲೈನ್‌ ಮೂಲಕ ತರಬೇತಿ ನೀಡುತ್ತಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ. ಜತೆಗೆ ಭಾರತವನ್ನು ನಂಬಿಕೆ ರಹಿತರ ನಾಡು ಎಂದು ಬಿಂಬಿಸಲು ಮುಂದಾಗಿದ್ದರು.

ರಿಯಾಸಿ ಬಸ್‌ಗೆ ಗುಂಡು: ಹಲವೆಡೆ ದಾಳಿ
ಜಮ್ಮು-ಕಾಶ್ಮೀರದ ರಿಯಾಸಿಯಲ್ಲಿ ಬಸ್‌ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಎನ್‌ಐಎ ಹಲವೆಡೆ ದಾಳಿ ನಡೆಸಿದೆ. ರಜೌರಿಯ 5 ಸ್ಥಳಗಳಲ್ಲಿ ನಡೆಸಲಾಗಿರುವ ದಾಳಿಯಲ್ಲಿ ಉಗ್ರ ಸಂಘಟನೆಗಳ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂಬವರ ನಿವಾಸಗಳಲ್ಲಿ ಶೋಧ ನಡೆಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next