Advertisement

ಮಾನವ ಹಕ್ಕುಗಳ ಆಯೋಗದ ಪಾತ್ರ ಹಿರಿದು: ಪ್ರಧಾನಿ ಮೋದಿ

10:17 AM Oct 13, 2018 | Team Udayavani |

ಹೊಸದಿಲ್ಲಿ: ಸರಕಾರದ ಅಭಿವೃದ್ಧಿ ಗುರಿಗಳು ಸಮರ್ಪಕವಾಗಿ ಸಾಕಾರಗೊಳ್ಳುವಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (ಎನ್‌ಎಚ್‌ಆರ್‌ಸಿ) ಪಾತ್ರ ಹಿರಿದು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಹೊಸದಿಲ್ಲಿಯಲ್ಲಿ ಶುಕ್ರವಾರ ನಡೆದ ಆಯೋಗದ 25ನೇ ಸಂಸ್ಥಾಪನಾ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ದೇಶದ ಸಮಸ್ತ ನಾಗರಿಕರಿಗೆ ಅವರ ಹಕ್ಕುಗಳ ಉಪಯೋಗ ಸಿಗುವಂತೆ ಮಾಡುವಲ್ಲಿ ಸರಕಾರ ಕಟಿಬದ್ಧವಾಗಿದೆ. ಇತ್ತೀಚೆಗೆ ತ್ರಿವಳಿ ತಲಾಖ್‌ ಬಗ್ಗೆ ರೂಪಿಸಿರುವ ಕಾನೂನು ಇದಕ್ಕೆ ಸೂಕ್ತ ಉದಾಹರಣೆ ಎಂದರು. ಸದ್ಯದಲ್ಲೇ ಈ ಕಾನೂನಿಗೆ ರಾಜ್ಯಸಭೆಯ ಒಪ್ಪಿಗೆ ಸಿಗುವ ಆಶಯವಿದೆ ಎಂದು ಅವರು ತಿಳಿಸಿದರು. ಇದೇ ವೇಳೆ, ಆಯುಷ್ಮಾನ್‌ ಭಾರತ ವಿಮಾ ಯೋಜನೆಯು ಜಾರಿಗೆ ಬಂದ ಎರಡೂವರೆ ವಾರಗಳಲ್ಲಿ ಸುಮಾರು 50 ಸಾವಿರ ಜನರು ಈ ಯೋಜನೆಯ ಉಪಯೋಗ ಪಡೆದಿದ್ದಾರೆಂದು  ಪ್ರಧಾನಿ ತಿಳಿಸಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next