Advertisement

ಅಮರನಾಥ ಗುಹೆಯಲ್ಲಿ  ಮಂತ್ರ, ಗಂಟೆ ನಾದ ನಿಷೇಧ

12:30 PM Dec 14, 2017 | Team Udayavani |

ಹೊಸದಿಲ್ಲಿ: ಅಮರನಾಥ ಯಾತ್ರೆ ವೇಳೆ ಗುಹೆಯೊಳಗೆ ಮಂತ್ರಗಳನ್ನು ಪಠಿಸುವುದು, ಗಂಟೆ ಮೊಳಗಿಸುವುದು, ದೇವರಿಗೆ ಜಯಕಾರ ಹಾಕುವುದಕ್ಕೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ನಿಷೇಧಿಸಿದೆ. 

Advertisement

ಜತೆಗೆ ಯಾತ್ರಿಕರು ಗುಹಾಂತರ ದೇಗುಲದೊಳಕ್ಕೆ ಮೊಬೈಲ್‌ ಕೊಂಡೊಯ್ಯು ವುದನ್ನು ನಿಷೇಧಿಸಲಾಗಿದೆ. ಅದನ್ನು ಆರಂಭದಲ್ಲಿಯೇ ಸಿಗುವ ಚೆಕ್‌ಪೋಸ್ಟ್‌ನಲ್ಲಿ ನೀಡಬೇಕು. ಕೊನೆಯ ಚೆಕ್‌ಪೋಸ್ಟ್‌ನಿಂದ ದೇಗುಲಕ್ಕೆ ಒಂದೇ ಸಾಲಿನ ಮೂಲಕ ಸಾಗಬೇಕು ಎಂದು ತಾಕೀತು ಮಾಡಿದೆ. ಯಾತ್ರಿಕರು ತಮ್ಮಲ್ಲಿರುವ  ಮೊಬೈಲ್‌ ಅಥವಾ ಇನ್ನಿತರ ವಸ್ತುಗಳನ್ನು ಇರಿಸಲು ಅಮರನಾಥ ಮಂಡಳಿ ಹೊಸ ಕಟ್ಟಡ ರಚಿಸಬೇಕು ಎಂದು ಎನ್‌ಜಿಟಿ ಆದೇಶಿಸಿದೆ. ಕಳೆದ ತಿಂಗಳು ನಡೆದಿದ್ದ ವಿಚಾರಣೆ ವೇಳೆ ಅಮರನಾಥ ಯಾತ್ರೆ ಮಂಡಳಿ ಯಾತ್ರಿಕರಿಗೆ ಸೂಕ್ತ ಕ್ರಮ ಕೈಗೊಳ್ಳದೇ ಇದ್ದುದಕ್ಕೆ ಎನ್‌ಜಿಟಿ ತರಾಟೆಗೆ ತೆಗೆದುಕೊಂಡಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next