Advertisement

“ಮುಂದಿನ ನಿಲ್ದಾಣ’ದಲ್ಲೊಂದು ಸ್ಪೆಷಲ್‌ ಸಾಂಗ್‌

10:41 AM Sep 09, 2019 | Lakshmi GovindaRaju |

ಕನ್ನಡದಲ್ಲಿ ಈಗಾಗಲೇ ಬಹುತೇಕ ಹೊಸಬರೇ ಸೇರಿ ಮಾಡಿರುವ “ಮುಂದಿನ ನಿಲ್ದಾಣ’ ಚಿತ್ರ ಒಂದಷ್ಟು ಸುದ್ದಿಯಲ್ಲಿದೆ. ಚಿತ್ರದ ಫ‌ಸ್ಟ್‌ಲುಕ್‌, ಟೀಸರ್‌, ಪೋಸ್ಟರ್‌ನಿಂದಲೇ ಗಮನಸೆಳೆದ ಚಿತ್ರ ಅಕ್ಟೋಬರ್‌ಗೆ ಬರಲು ಸಜ್ಜಾಗಿದೆ. ಈ ಚಿತ್ರದ ವಿಶೇಷವೆಂದರೆ, ಈ ಚಿತ್ರಕ್ಕೆ ತೆಲುಗಿನ ಯಶಸ್ವಿ ಚಿತ್ರ “ಮಹಾನಟಿ’ ಚಿತ್ರದ “ಮೂಗ ಮನಸುಲು..’ ಹಾಡಿಗೆ ನೃತ್ಯ ಸಂಯೋಜಿಸಿದ್ದ ವಿಶ್ವಕಿರಣ್‌ ನಂಬಿ ಅವರು ಹಾಡೊಂದಕ್ಕೆ ನೃತ್ಯ ಸಂಯೋಜನೆ ಮಾಡಿದ್ದಾರೆ.

Advertisement

ಹೌದು, ಕಿರಣ್‌ ಕಾವೇರಪ್ಪ ಅವರು ಬರೆದಿರುವ “ಮನಸೇ ಮಾಯ..’ ಎಂಬ ಹಾಡಿಗೆ ವಿಶ್ವ ಕಿರಣ್‌ ನಂಬಿ ನೃತ್ಯ ಸಂಯೋಜಿಸಿದ್ದಾರೆ. ಈ ಹಾಡಿಗೆ ಮಸಾಲ ಕಾಫಿ ಬ್ಯಾಂಡ್‌ ಸಂಗೀತ ಸಂಯೋಜಿಸಿದ್ದು, ಸೂರಜ್‌ ಸಂತೋಷ್‌ ಮತ್ತು ವರುಣ್‌ ಸುನೀಲ್‌ ಅವರು ಹಾಡಿದ್ದಾರೆ. ಹಾಡಲ್ಲಿ ಪ್ರವೀಣ್‌ ತೇಜ್‌ ಹಾಗು ಅಜೇಯ್‌ ರಾಜ್‌ ಕಾಣಿಸಿಕೊಂಡಿದ್ದಾರೆ.

ಇನ್ನೊಂದು ವಿಶೇಷವೆಂದರೆ, ಹಿಂದಿಯ “ರಾಝಿ’ ಚಿತ್ರದಲ್ಲಿ ಸಂಗೀತ ನುಡಿಸಿರುವ ಅರ್ಷದ್‌ ಖಾನ್‌ ಅವರು ಚಿತ್ರದಲ್ಲಿ ಎಸ್ರಾಜ್‌ ವಾದ್ಯವನ್ನು ನುಡಿಸಿದ್ದಾರೆ. ಕನ್ನಡ ಚಿತ್ರರಂಗದ ಮಟ್ಟಿಗೆ ಇದೊಂದು ಹೊಸ ಪ್ರಯತ್ನವಾಗಿದ್ದು, ಕೇಳುಗರಿಗೆ ಆ ಹಾಡು ಹೊಸತನಕ್ಕೆ ಸಾಕ್ಷಿಯಾಗಲಿದೆ ಎಂಬುದು ಚಿತ್ರತಂಡದ ಮಾತು. ಚಿತ್ರಕ್ಕೆ ವಿನಯ್‌ ಭಾರಧ್ವಜ್‌ ನಿರ್ದೇಶಕರು.

Advertisement

Udayavani is now on Telegram. Click here to join our channel and stay updated with the latest news.

Next