Advertisement

ಮುಂದಿನದ್ದು ಮೂಡಲ ಆಂಜನೇಯಸ್ವಾಮಿ- ಮುಲ್ಲಾಸಾಬಿ ನಡುವಿನ ಚುನಾವಣೆ: ಸಿ.ಟಿ ರವಿ

02:16 PM Dec 30, 2022 | Team Udayavani |

ಮಂಡ್ಯ: ಮುಂದಿನ ಚುನಾವಣೆ ಮೂಡಲ ಆಂಜನೇಯಸ್ವಾಮಿ ಹಾಗೂ ಮುಲ್ಲಾಸಾಬಿ ನಡುವಿನ ಚುನಾವಣೆಯಾಗಿದೆ ಎಂದು ಸಿ.ಟಿ.ರವಿ ಹೇಳಿದರು.

Advertisement

ನಗರದಲ್ಲಿ ನಡೆಯುತ್ತಿರುವ ಜನಸಂಕಲ್ಪ ಯಾತ್ರೆಯ ಸಮಾವೇಶದಲ್ಲಿ ಮಾತನಾಡಿ, ಜಿಲ್ಲೆಯ ಜನ ಬಾಕಿ ತೀರಿಸಬೇಕಾಗಿದೆ. ಇದೊಂದು ಟಿಪ್ಪು ಹಾಗೂ ಒಡೆಯರ್ ನಡುವಿನ ಚುನಾವಣೆಯಾಗಿದೆ. ಈಗಾಗಲೇ ದತ್ತಪೀಠಕ್ಕೆ ನ್ಯಾಯ ಒದಗಿಸಿದ್ದೇವೆ. ಅದರಂತೆ ಹನುಮಪ್ಪನಿಗೂ ನ್ಯಾಯ ಒದಗಿಸುತ್ತೇವೆ ಎಂದರು.

ಜಿಲ್ಲೆಗೆ ಅಭಿವೃದ್ಧಿಯ ಕೊಡುಗೆ ನೀಡಿದ್ದು ಒಡೆಯರ್ ಅವರೇ ಹೊರತು, ಟಿಪ್ಪು ಅಲ್ಲ. ಉರಿಗೌಡ, ದೊಡ್ಡನಂಜೇಗೌಡರು ನಿಜವಾದ ಹುಲಿಗಳು. ಅವರ ಪ್ರತಿಮೆಯನ್ನು ನಾನು ಹಾಗೂ ಸಿ.ಪಿ.ಯೋಗೇಶ್ವರ್ ಮಾಡಲಿದ್ದೇವೆ ಎಂದು ತಿಳಿಸಿದರು.

ಅಜ್ಜ ಮೊಮ್ಮಗನಿಗೆ ಹಾಗೂ ತಾಯಿ ಮಗನಿಗೆ ಸ್ಥಾನ ಬಿಟ್ಟು ತ್ಯಾಗ ಮಾಡಿದ್ದೇವೆ ಎನ್ನುತ್ತಾರೆ. ಆದರೆ ಅದನ್ನು ತ್ಯಾಗ ಎನ್ನುವುದಿಲ್ಲ. ಅದನ್ನು ಸ್ವಾರ್ಥ ಎನ್ನುತ್ತಾರೆ. ಅವರಿಗೆ ತಕ್ಕಪಾಠ ಕಲಿಸಬೇಕು ಎಂದು ಜೆಡಿಎಸ್ ವಿರುದ್ಧ ಪರೋಕ್ಷವಾಗಿ ಗುಡುಗಿದರು.

Advertisement

Udayavani is now on Telegram. Click here to join our channel and stay updated with the latest news.

Next