Advertisement

ಶುಕ್ರವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹಬಲ

07:09 AM Jul 22, 2022 | Team Udayavani |

ಮೇಷ:

Advertisement

ಆರೋಗ್ಯ ವಿಚಾರದಲ್ಲಿ ನಿರ್ಲಕ್ಷ್ಯ ಮಾಡದಿರಿ. ಉದ್ಯೋಗ ವ್ಯವಹಾರಗಳಲ್ಲಿ ಗುರುಹಿರಿಯರ, ಮೇಲಧಿಕಾರಿಗಳ ಸಹಕಾರ ಪ್ರೋತ್ಸಾಹದಿಂದ ಗಣನೀಯ ಅಭಿವೃದ್ಧಿ. ದೀರ್ಘ‌ ಪ್ರಯಾಣ ಸಂಭವ. ಸ್ಥಾನ ಗೌರವಾದಿ ಪ್ರಾಪ್ತಿ.

ವೃಷಭ:

ಸುದೃಢ ಆರೋಗ್ಯ. ಕೈಗೊಂಡ ಕೆಲಸ ಕಾರ್ಯಗಳಲ್ಲಿ ಜವಾಬ್ದಾರಿಯುತ ನಡೆಯಿಂದ ಸ್ಥಾನಮಾನ ಕೀರ್ತಿ ಯಶಸ್ಸು ಲಭ್ಯ. ಹಣಕಾಸಿನ ವಿಚಾರದಲ್ಲಿ ಪರರ ಅವಲಂಬನೆ. ವಿದೇಶ ಮೂಲದ ಸಂಪಾದನೆ. ಎಚ್ಚರಿಕೆಯಿಂದ ಅನ್ಯರ ಸಹಾಯ ಪಡೆಯಿರಿ.

ಮಿಥುನ:

Advertisement

ಉತ್ತಮ ಆರೋಗ್ಯ. ಉತ್ತಮ ವಾಕ್‌ ಚತುರತೆಯಿಂದ ಪಾಲುದಾರರ ಸಹಕಾರ ದಿಂದ ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷೆಗೂ ಮೀರಿದ ಸಫ‌ಲತೆ. ಹಣಕಾಸಿನ ವಿಚಾರದಲ್ಲಿ ಸ್ಪಷ್ಟತೆ ಇರಲಿ. ಮಿತ್ರರಿಂದ ಸಹಕಾರ. ಸಾಂಸಾರಿಕ ಸಣ್ಣ ಪ್ರಯಾಣ.

ಕರ್ಕ:

ಆರೋಗ್ಯದಲ್ಲಿ ಸುಧಾರಣೆ. ಉದ್ಯೋಗ ವ್ಯವಹಾರ ನಿಮಿತ್ತ ಪ್ರಯಾಣ ಸಂಭವ. ಪಾಲುದಾರರ ಸಹಕಾರ ಅನಿವಾರ್ಯವಾದೀತು. ಸ್ಥಿರ ಆಸ್ತಿಗಳಿಂದ ಧನವೃದ್ಧಿ. ಬಂಧುಗಳಿಂದ ಸಹಕಾರ. ದಂಪತಿಗಳಿಗೆ ಪರಸ್ಪರರಿಂದ ಲಾಭ.

ಸಿಂಹ:

ಆರೋಗ್ಯ ಉತ್ತಮ. ಉದ್ಯೋಗ ವ್ಯವಹಾರ ವಿಚಾರದಲ್ಲಿ ಅಧಿಕ ಜವಾಬ್ದಾರಿ ಹಾಗೂ ಪರಿಶ್ರಮ ಅಗತ್ಯ. ಗೌರವಯುತ ಹಣ ಸಂಪಾದನೆ. ಅನ್ಯರ ಸಹಾಯ ನಿರೀಕ್ಷಿಸದಿರಿ. ದಾಂಪತ್ಯ ಸಾಮರಸ್ಯಕ್ಕೆ ಹೆಚ್ಚಿದ ಶ್ರಮ. ವಿದ್ಯಾರ್ಥಿಗಳಿಗೆ ಪ್ರಗತಿ.

ಕನ್ಯಾ:

ಸುದೃಢ ಆರೋಗ್ಯ. ಉದ್ಯೋಗ ವ್ಯವಹಾರ ದಲ್ಲಿ ಸಂತೋಷ ವೃದ್ಧಿ. ನಿರೀಕ್ಷೆಗೂ ಮೀರಿದ ಅಭಿವೃದ್ಧಿ. ಹಣಕಾಸಿನ ವಿಚಾರದಲ್ಲಿ ಅನಗತ್ಯ ತೊಂದರೆ ಆಗದಂತೆ ಗಮನಿಸಿ. ಸ್ವಪ್ರಯತ್ನಕ್ಕೆ ಆದ್ಯತೆ ನೀಡಿ. ಗುರುಹಿರಿಯರ ಸ್ಪಷ್ಟ ಮಾರ್ಗದರ್ಶನ ಲಭ್ಯ.

ತುಲಾ:

ಆರೋಗ್ಯ ಸ್ಥಿರ. ಸಂಪತ್ತು ವೃದ್ಧಿ, ಗೃಹದಲ್ಲಿ ಸಂತಸದ ವಾತಾವರಣ. ಉದ್ಯೋಗ ವ್ಯವಹಾರಗಳಲ್ಲಿ ಪರಸ್ಪರ ಸಹಕಾರ. ನಿರೀಕ್ಷಿತ ಸ್ಥಾನ ಸುಖ. ಸಾಂಸಾರಿಕ ಸುಖದಲ್ಲಿ ಪ್ರಗತಿ. ವಿದ್ಯಾರ್ಥಿಗಳಿಗೆ ಉತ್ತಮ ಬದಲಾವಣೆಯ ಸಮಯ.

ವೃಶ್ಚಿಕ:

ನಿರೀಕ್ಷಿತ ಸ್ಥಾನ ಲಭಿಸಿದ ತೃಪ್ತಿ. ಉದ್ಯೋಗ ವ್ಯವಹಾರಗಳಲ್ಲಿ ಗೌರವಾನ್ವಿತ ಅಭಿ ವೃದ್ಧಿ. ಸ್ಥಿರವಾದ ಅಭಿವೃದ್ಧಿದಾಯಕ ಧನ ಸಂಪಾ ದನೆ. ಭೂಮಿ ವಾಹನ ಆಸ್ತಿ ವಿಚಾರದಲ್ಲಿ ಪ್ರಗತಿ. ಅವಿವಾಹಿತರಿಗೆ ಉತ್ತಮ ಸಂಬಂಧಗಳು ಒದಗುವ ಸಮಯ.

ಧನು:

ಆರೋಗ್ಯ ವೃದ್ಧಿ. ಗುರುಹಿರಿಯರ ಸಹಕಾರ, ಮಾರ್ಗದರ್ಶನದಿಂದ ಮಾಡುವಂತಹ ಕೆಲಸ ಕಾರ್ಯಗಳಲ್ಲಿ ಅಭಿವೃದ್ಧಿ. ಉತ್ತಮ ಧನ ವೃದ್ಧಿ. ವಿದ್ಯಾರ್ಥಿಗಳಿಗೆ ಅಧಿಕ ಶ್ರಮದಿಂದ ಕಾರ್ಯ ಸಫ‌ಲತೆ. ದಾಂಪತ್ಯದಲ್ಲಿ ಸಹನೆ, ತಾಳ್ಮೆ ಇರಲಿ.

ಮಕರ:

ಆರೋಗ್ಯ ಉತ್ತಮ. ಉತ್ತಮ ಧನಾರ್ಜನೆ ಇದ್ದರೂ ಅನಗತ್ಯ ಖರ್ಚು ಆಗದಂತೆ ಗಮನಹರಿಸಿ. ಸಹೋದ್ಯೋಗಿಗಳಿಂದ ನಿರೀಕ್ಷಿತ ಸಹಕಾರ ಲಭ್ಯ. ಪತ್ರ ವ್ಯವಹಾರ, ಭೂಮಿ, ವಾಹನ, ಆಸ್ತಿ ವಿಚಾರದಲ್ಲಿ ಜಾಗ್ರತೆಯ ನಡೆ ಅಗತ್ಯ.

ಕುಂಭ:

ದೂರ ಪ್ರಯಾಣ ಸಂಭವ. ಹಣಕಾಸಿನ ವಿಚಾರದಲ್ಲಿ ನಾನಾ ರೀತಿಯ ಅವಕಾಶ ಒದಗಿ ಬಂದಾವು. ಉದ್ಯೋಗ ವ್ಯವಹಾರಗಳಲ್ಲಿ ಉತ್ತಮ ಪ್ರಗತಿ. ಗುರುಹಿರಿಯರ ಪ್ರೋತ್ಸಾಹ ಸಿಗುವುದು. ದಾಂಪತ್ಯ ಸುಖ ತೃಪ್ತಿದಾಯಕ. ಧಾರ್ಮಿಕ ಕ್ಷೇತ್ರ ದರ್ಶನ.

ಮೀನ:

ಆರೋಗ್ಯದಲ್ಲಿ ಸುಧಾರಣೆ. ಸಾಹಸ ಶ್ರಮದಿಂದ ಕೂಡಿದ ಧನಾರ್ಜನೆ. ಪತ್ರ ವ್ಯವಹಾರ ವಿಚಾರಗಳಲ್ಲಿ ಜಾಗ್ರತೆಯಿಂದ ವ್ಯವಹರಿಸಿ. ದಾಂಪತ್ಯ ಸಾಂಸಾರಿಕ ಸುಖ ತೃಪ್ತಿದಾಯಕ. ಹಿರಿಯರ ಆರೋಗ್ಯ ಗಮನಿಸಿ. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಫ‌ಲ. ಉದ್ಯೋಗ ವ್ಯವಹಾರಗಳಲ್ಲಿ ಸಹೋದ್ಯೋಗಿಗಳ ಸಹಾಯ ಸಲಹೆ ಅಗತ್ಯ.

Advertisement

Udayavani is now on Telegram. Click here to join our channel and stay updated with the latest news.

Next