Advertisement

ಹರಿಯಾಣ: ಕಲ್ಲು ಗಣಿಗಾರಿಕೆ ತಡೆಯಲು ಹೋದ ಡಿವೈಎಸ್‌ಪಿ ಹತ್ಯೆ

08:09 AM Jul 20, 2022 | Team Udayavani |

ಗುರುಗ್ರಾಮ: ಅಕ್ರಮ ಕಲ್ಲು ಗಣಿಗಾರಿಕೆ ತಡೆಯಲು ಹೋದ ಡಿವೈಎಸ್‌ಪಿ ಮೇಲೆ ಲಾರಿ ಹರಿಸಿ ಹತ್ಯೆ ಮಾಡಲಾಗಿದೆ.

Advertisement

ಹರಿಯಾಣದ ನುಹ್‌ ಜಿಲ್ಲೆಯಲ್ಲಿ ಮಂಗಳವಾರ ಈ ಘಟನೆ ನಡೆ ದಿದ್ದು, ಹತ್ಯೆ ಗೀಡಾದ ಅಧಿ ಕಾರಿ  ಯನ್ನು ಸುರೇಂದ್ರ ಸಿಂಗ್‌ ಬಿಷ್ಣೋಯ್‌ ಎಂದು ಗುರುತಿಸಲಾಗಿದೆ. ಕೃತ್ಯ ಎಸಗಿದ ಲಾರಿಯ ಚಾಲಕ ನನ್ನು ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.

ಜಿಲ್ಲೆಯ ಅರಾವಳಿ ಪರ್ವತ ಪ್ರದೇಶದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಬಗ್ಗೆ ಬಿಷ್ಣೋಯ್‌ ಅವರಿಗೆ ಮಾಹಿತಿ ಬಂದಿತ್ತು.

ಪಚ್‌ಗಾಂವ್‌ನಲ್ಲಿ ಗಣಿಗಾರಿಕೆ ನಡೆಯುತ್ತಿದ್ದ ವೇಳೆ ಸಿಬಂದಿ ಜತೆಗೆ ಅವರು ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಅಲ್ಲಿದ್ದವರು ಪರಾರಿಯಾಗಿದ್ದಾರೆ. ಈ ಪೈಕಿ ಕೆಲವರು ಕಲ್ಲು ತುಂಬಿದ ಲಾರಿಯನ್ನೇರಿ ಪರಾರಿಯಾಗಲು ಮುಂದಾಗಿದ್ದರು.

ಚಲಿಸುತ್ತಿದ್ದ ಲಾರಿಯನ್ನು ನಿಲ್ಲಿಸುವಂತೆ ಸುರೇಂದ್ರ ಸಿಂಗ್‌ ಸೂಚನೆ ನೀಡಿದರು. ಆದರೆ ಲಾರಿ ಚಾಲಕ ಡಿವೈಎಸ್‌ಪಿ ಮೇಲೆಯೇ ವಾಹನ ಹರಿಸಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಬಿಷ್ಣೋಯ್‌ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫ‌ಲಕಾರಿಯಾಗದೇ ಸಾವನ್ನಪ್ಪಿದರು. ಅವರು ನಿವೃತ್ತಿಯಾಗಲು ಇನ್ನು ಕೆಲವೇ ತಿಂಗಳು ಬಾಕಿ ಉಳಿದಿದ್ದವು.

Advertisement

ರಾಜಕೀಯವಾಗಿಯೂ ಈ ಘಟನೆ ಬಿರುಸು ಪಡೆದುಕೊಂಡಿದೆ. ಅಧಿಕಾರಿಯನ್ನು ಹತ್ಯೆ ಮಾಡಿದವರ ವಿರುದ್ಧ ಕ್ರಮ ಕೈಗೊಂಡು ಕಲ್ಲು ಗಣಿ ಮಾಫಿಯಾಕ್ಕೆ ಕಠಿನ ಸಂದೇಶ ರವಾನಿಸಬೇಕು ಎಂದು ಬಿಜೆಪಿ ಸಂಸದ ಬೃಜೇಂದ್ರ ಸಿಂಗ್‌ ಒತ್ತಾಯಿಸಿದ್ದಾರೆ. ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌ ಕೂಡ ಘಟನೆಯನ್ನು ಖಂಡಿಸಿದ್ದಾರೆ. ಪೊಲೀಸ್‌ ಅಧಿಕಾರಿಯ ಹತ್ಯೆ ರಾಜ್ಯದಲ್ಲಿ ಸರಕಾರದ ವೈಫ‌ಲ್ಯವನ್ನು ಎತ್ತಿ ತೋರಿಸುತ್ತದೆ ಎಂದು ಟೀಕಿಸಿದ್ದಾರೆ.

ಹರಿಯಾಣದಲ್ಲಿ ಶಾಸಕರಿಗೆ ಮತ್ತು ಪೊಲೀಸರಿಗೇ ಭದ್ರತೆ ಇಲ್ಲ ಎಂದಾದರೆ ಜನಸಾಮಾನ್ಯರ ಪರಿಸ್ಥಿತಿ ಏನು ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.

1 ಕೋಟಿ ರೂ. ಪರಿಹಾರ
ಹತ್ಯೆಯಾಗಿರುವ ಡಿವೈಎಸ್‌ಪಿ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ನೀಡುವುದಾಗಿ ಹರಿಯಾಣ ಮುಖ್ಯಮಂತ್ರಿ ಮನೋಹರ ಲಾಲ್‌ ಖಟ್ಟರ್‌ ಹೇಳಿದ್ದಾರೆ. ಜತೆಗೆ ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆಯನ್ನು ಮಟ್ಟ ಹಾಕಲಾಗುತ್ತದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next