Advertisement

ಸೇಡಿನ ಜಾಡು ಸುದ್ದಿಗೆ ಬಂತು ಶುದ್ಧಿ

03:45 AM Feb 10, 2017 | Team Udayavani |

ಒಂದು ಕಡೆ ವಿದೇಶಿ ಮಹಿಳೆಯ ಸೇಡಿನ ಕತೆ, ಮತ್ತೂಂದು ಕಡೆ ಬೀದಿ ನಾಟಕದ ಮೂಲಕ ಜಾಗೃತಿ, ಇನ್ನೊಂದು ಕಡೆ ಸ್ಪೆಷಲ್‌ ಕ್ರೈಂ ಬ್ರಾಂಚ್‌ನ ಇನ್ವೆಸ್ಟಿಗೇಶನ್‌… ಈ ಮೂರು ಟ್ರ್ಯಾಕ್‌ಗಳನ್ನಿಟ್ಟುಕೊಂಡು ಸಿನಿಮಾ ಮಾಡಿದ್ದಾರೆ ಆದರ್ಶ್‌ ಎಚ್‌ ಈಶ್ವರಪ್ಪ. ಯಾರು ಈ ಆದರ್ಶ್‌ ಎಂದರೆ “ಶುದ್ಧಿ’ ಸಿನಿಮಾವನ್ನು ತೋರಿಸಬೇಕು. “ಶುದ್ಧಿ’ ಮೂಲಕ ನಿರ್ದೇಶಕರಾಗಿರುವ ಆದರ್ಶ್‌ ಇತ್ತೀಚೆಗೆ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಿದ್ದಾರೆ. ಪ್ರಿಯಾಂಕಾ ಉಪೇಂದ್ರ ಟ್ರೇಲರ್‌ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಪ್ರೋತ್ಸಾಹದ ಮಾತುಗಳನ್ನಾಡಿ ಬೆನ್ನು ತಟ್ಟಿದ್ದಾರೆ. ಆದರ್ಶ್‌ ಹಾಲಿವುಡ್‌ನ‌ಲ್ಲಿ ಸಿನಿಮಾ ಕೋರ್ಸ್‌ ಮಾಡಿಕೊಂಡವರು. ಹಾಗಾಗಿ ಚಿತ್ರದಲ್ಲಿ ಸಾಕಷ್ಟು ಮಂದಿ ಹಾಲಿವುಡ್‌ ತಂತ್ರಜ°ರು ಕೆಲಸ ಮಾಡಿದ್ದಾರೆ.

Advertisement

ಶುದ್ಧಿ ಎಂದರೆ ಏನು ಎಂದು ನೀವು ಕೇಳಬಹುದು. ಅದಕ್ಕೆ ಆದರ್ಶ್‌ ಉತ್ತರಿಸುತ್ತಾರೆ. “ಶುದ್ಧಿ ಎನ್ನುವುದಕ್ಕೆ ಎರಡು ಅರ್ಥಗಳಿವೆ. ಶುದ್ಧೀಕರಣ ಒಂದಾದರೆ, ದುರ್ಗಾ ದೇವಿಯ ಮತ್ತೂಂದು ಹೆಸರು. ಇವೆರಡು ಕೂಡಾ ನಮ್ಮ ಕಥೆಗೆ ಹೊಂದಿಕೆಯಾಗುತ್ತದೆ. ಇದು ಮಹಿಳಾ ಪ್ರಧಾನ ಚಿತ್ರ. ಮುಖ್ಯವಾಗಿ ಶುದ್ಧಿಯ ಕಥೆ ಮೂರು ಟ್ರ್ಯಾಕ್‌ಗಳಲ್ಲಿ ಸಾಗುತ್ತದೆ. ವಿದೇಶಿ ಮಹಿಳೆ ತನಗಾದ ಅನ್ಯಾಯಕ್ಕೆ ಸೇಡು ತೀರಿಸೋದು ಒಂದಾದರೆ, ಬೀದಿ ನಾಟಕಗಳ ಮೂಲಕ ಅರಿವು ಮೂಡಿಸುವ ಗುಂಪು ಮತ್ತೂಂದು ಕಡೆ. ಕ್ರೈಂ ಬ್ರಾಂಚ್‌ನ ತನಿಖೆ ಚಿತ್ರದ ಮತ್ತೂಂದು ಟ್ರ್ಯಾಕ್‌. ಈ ಮೂರು ಟ್ರ್ಯಾಕ್‌ಗಳಿಗೂ ಒಂದಕ್ಕೊಂದು ಸಂಬಂಧವಿದೆ ಮತ್ತು ಕ್ಲೈಮ್ಯಾಕ್ಸ್‌ನಲ್ಲಿ ಆ ಎಲ್ಲಾ ಟ್ರ್ಯಾಕ್‌ಗಳು ಒಂದಾಗುತ್ತವೆ’ ಎಂದು ಸಿನಿಮಾ ಬಗ್ಗೆ ಹೇಳಿದರು ಆದರ್ಶ್‌. 

ಚಿತ್ರದ ಪ್ರಮುಖ ಪಾತ್ರದಲ್ಲಿ ನಿವೇದಿತಾ ನಟಿಸಿದ್ದಾರೆ. ಅವರಿಗೆ ಇಲ್ಲಿ ಒಳ್ಳೆಯ ಪಾತ್ರ ಸಿಕ್ಕಿದೆಯಂತೆ. “ಹೆಣ್ಣು ಅಬಲೆ ಯಲ್ಲ ಎನ್ನುವುದನ್ನು ತೋರಿಸುವ ಸಿನಿಮಾವಿದು. ನಿರ್ದೇಶಕ ಆದರ್ಶ್‌ಗೆ ತಾನು ಏನು ಮಾಡುತ್ತಿದ್ದೇನೆಂಬ ಬಗ್ಗೆ ಸ್ಪಷ್ಟ ಅರಿವಿತ್ತು’ ಎಂದು ಸಿನಿಮಾ ಬಗ್ಗೆ ಹೇಳಿದರು. ಇನ್ನು, ಚಿತ್ರದಲ್ಲಿ ಶಶಾಂಕ್‌ ಪುರುಷೋತ್ತಮ ಕೂಡಾ ಪೊಲೀಸ್‌ ಆಫೀಸರ್‌ ಆಗಿ ನಟಿಸಿದ್ದಾರೆ. ಆದರ್ಶ್‌ ಇಡೀ ಸ್ಕ್ರಿಪ್ಟ್ ಕಳಿಸಿಕೊಟ್ಟಿದ್ದರಂತೆ. ಚಿತ್ರೀಕರಣದ ವೇಳೆ ಮತ್ತಷ್ಟು ಹೊಸ ಅಂಶಗಳನ್ನು ಸೇರಿಸಿದ್ದಾಗಿ ಹೇಳಿಕೊಂಡರು. 

ಚಿತ್ರವನ್ನು ನಂದಿನಿ ಮಾದೇಶ್‌ ನಿರ್ಮಿ ಸಿದ್ದಾರೆ. ಚಿತ್ರದಲ್ಲಿ ಅಜೇಯ್‌ ರಾಜ್‌, ಸಿದ್ಧಾರ್ಥ್ ಸೇರಿದಂತೆ ಅನೇಕರು ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next