Advertisement

Tragic: ನಿಂತಿದ್ದ ಟ್ರಕ್‌ಗೆ ಕಾರು ಢಿಕ್ಕಿ; ನವ ದಂಪತಿ ಸೇರಿ ಒಂದೇ ಕುಟುಂಬದ ಐವರು ದುರ್ಮರಣ

02:55 PM Mar 06, 2024 | Team Udayavani |

ಆಂಧ್ರ ಪ್ರದೇಶ: ಭೀಕರ ಅಪಘಾತವೊಂದರಲ್ಲಿ ನವ ವಿವಾಹಿತರು ಸೇರಿ ಒಂದೇ ಕುಟುಂಬದ ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಆಂಧ್ರ ಪ್ರದೇಶದ ನಂದ್ಯಾಲದಲ್ಲಿ ಬುಧವಾರ(ಮಾ.6 ರಂದು) ಮುಂಜಾನೆ ನಡೆದಿದೆ.

Advertisement

ಸಿಕಂದರಾಬಾದ್‌ನ ಅಲ್ವಾಲ್ ಮೂಲದ ಬಾಲಕಿರಣ್ , ಕಾವ್ಯಾ ,ಬಾಲಕಿರಣ್‌ನ ತಾಯಿ ಮಂತ್ರಿ ಲಕ್ಷ್ಮಿ , ತಂದೆ ಮಂತ್ರಿ ರವೀಂದರ್ ಮತ್ತು ಕಿರಿಯ ಸಹೋದರ ಉದಯ್ ಮೃತಪಟ್ಟಿದ್ದಾರೆ. ಇದೇ ಫೆ.29 ರಂದು ಬಾಲಕಿರಣ್ ಮತ್ತು ಕಾವ್ಯಾ ಅವರ ವಿವಾಹ ನಡೆದಿತ್ತು.

ಇತ್ತೀಚೆಗೆ ವಿವಾಹವಾದ ದಂಪತಿ ಹಾಗೂ ಕುಟುಂಬ ಸಹಿತ ತಿರುಪತಿ ದೇವಾಲಯದ ದರ್ಶನ ಪಡೆದು ಮನೆಗೆ ವಾಪಾಸ್‌ ಆಗುತ್ತಿತ್ತು. ಈ ವೇಳೆ ಮುಂಜಾನೆ 5:15 ರ ಸಮಯಕ್ಕೆ ರಸ್ತೆಬದಿ ನಿಲ್ಲಿಸಿದ್ದ ಟ್ರಕ್‌ ಗೆ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಭೀಕರ ಘಟನೆ ಸಂಭವಿಸಿ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ನಂದ್ಯಾಲ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಕೆ ರಘುವೀರ ರೆಡ್ಡಿ ಹೇಳಿದ್ದಾರೆ.

ಪೊಲೀಸರು ಮೃತ ಸಂಬಂಧಿಕರಿಗೆ ಮಾಹಿತಿಯನ್ನು ನೀಡಿ ,ಮೃತದೇಹಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next