Advertisement

ನವ ವಿವಾಹಿತೆ ಆತ್ಮಹತ್ಯೆ ; ಮಗಳ ಸಾವಿನ ಕುರಿತಾಗಿ ಹೆತ್ತವರಿಗೆ ಸಂಶಯ

09:15 PM May 25, 2020 | Team Udayavani |

ಬೀದರ್: ನವ ವಿವಾಹಿತೆ ಗೃಹಿಣಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಬಸವ ಕಲ್ಯಾಣದ ಈಶ್ವರ ನಗರದಲ್ಲಿ ನಡೆದಿದೆ.

Advertisement

19 ವರ್ಷ ಪ್ರಾಯದ ಅಂಜಲಿ ಹುಸೇನಿ ಎಂಬ ಗೃಹಿಣಿ ಇಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಮಹಾರಾಷ್ಟ್ರ ಉಮ್ಮರ್ಗಾದ ನಿವಾಸಿಯಾಗಿರುವ ಅಂಜಲಿಯ ವಿವಾಹ ಆರು ತಿಂಗಳ ಹಿಂದೆ ಹುಸೇನಿ ಎಂಬವರ ಜೊತೆ ನೆರವೇರಿತ್ತು.

ಇಂದು ನಸುಕಿನ ಜಾವ ಅಂಜಲಿ ಮೃತದೇಹ ಮನೆಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಕಂಡುಬಂದಿದೆ.

ಆದರೆ, ಅಂಜಲಿ ಪಾಲಕರು ತಮ್ಮ ಮಗಳ ಸಾವಿನ ಕುರಿತಾಗಿ ಸಂಶಯ ವ್ಯಕ್ತಪಡಿದ್ದಾರೆ. ಆಕೆಯ ಪತಿಯೇ ಅಂಜಲಿ ಸಾವಿಗೆ ಕಾರಣ ಎಂದು ಆಕೆಯ ಪೋಷಕರು ಆರೋಪ ಮಾಡಿದ್ದಾರೆ.

Advertisement

ಘಟನೆಗೆ ಸಂಬಂಧಿಸಿದಂತೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ತಹಸೀಲ್ದಾರ್ ಹಾಗೂ ಪಿಎಸ್ಐ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next